ಮತ್ತೊಂದು ಕಡೆ, ಜೆಡಿಎಸ್ 93,609 ಮತ ಪಡೆದು ಒಂದು ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಜನಾರ್ದನ ರೆಡ್ಡಿ ಅವರ ಕೆಆರ್ಪಿಪಿ 80,579 ಮತಗಳನ್ನು ಪಡೆದಿತ್ತಾದರೂ ಒಂದೂ ಸ್ಥಾನವನ್ನೂ ಗೆಲ್ಲಲು ಆಗಿರಲಿಲ್ಲ. ಆದರೆ, ಬಿಜೆಪಿ ಸೋಲಿನಲ್ಲಿ ಕೆಆರ್ಪಿಪಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದಂತೂ ಸುಳ್ಳಲ್ಲ. ಇನ್ನೊಂದು ಕಡೆ, ತಾನು ಸ್ಪರ್ಧಿಸದ ಕಡೆಗಳಲ್ಲಿ ಯಾರಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬುದು ಲೆಕ್ಕಕ್ಕೆ ಸಿಗದೇ ಹೋಗಿದ್ದರೂ, ಬಿಜೆಪಿ ವಿರುದ್ಧದ ಜನಾರ್ದನ ರೆಡ್ಡಿ ಮುನಿಸು ಕಾಂಗ್ರೆಸ್ಗೆ ವರದಾನವಾಗಿತ್ತು ಎಂದು ವಿಶ್ಲೇಷಿಸಲಾಗುತ್ತದೆ.