<p><strong>ತೋರಣಗಲ್ಲು:</strong> ಸಮೀಪದ ಕುಡುತಿನಿ ಪಟ್ಟಣಕ್ಕೆ ಕೊರೊನಾ ವೈರಸ್ ಹರಡದಂತೆ ಪಟ್ಟಣದ ನಾಗರಿಕರು ಪಟ್ಟಣದ ಮುಖ್ಯದ್ವಾರದ ಬಾಗಿಲಿಗೆ ನಿಂಬೆಹಣ್ಣು, ಬೇವಿನ ಎಲೆ, ತೆಂಗಿನಕಾಯಿ ಹಾಗೂ ಮೆಣಸಿನಕಾಯಿ ಇರುವ ಬೃಹತ್ ಹಾರವನ್ನು ಕಟ್ಟಿ ಧಾರ್ಮಿಕ ದಿಗ್ಬಂಧನ ಮಂಗಳವಾರ ವಿಧಿಸಿದ್ದಾರೆ.</p>.<p>ಪಟ್ಟಣದ ಹಿರಿಯ ನಾಗರಿಕ ಹನುಮೇಶಿ ಮಾತನಾಡಿ, ‘ಕುಡುತಿನಿ ಪಟ್ಟಣದಲ್ಲಿ ಕೊರೊನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿದ್ದು, ಬಹಳಷ್ಟು ಮಂದಿ ಮೃತಪಟ್ಟಿದ್ದಾರೆ. ಇದನ್ನು ತಡೆಯಲು ಹಾಗೂ<br />ಪಟ್ಟಣದ ಜನರಿಗೆ ದೈವತ್ವದ ಶಕ್ತಿಯು ಕಾಪಾಡಲಿ ಎನ್ನುವ ದೃಷ್ಟಿಯಿಂದ ಪಟ್ಟಣದ ಒಟ್ಟು ಏಳು ಮುಖ್ಯ ದ್ವಾರ ಬಾಗಿಲುಗಳಿಗೆ<br />ಧಾರ್ಮಿಕ ವಿಧಿ ವಿಧಾನದಿಂದ ದಿಗ್ಬಂಧನದ ಹಾರಗಳನ್ನು ಕಟ್ಟಲಾಗಿದೆ’ ಎಂದರು.</p>.<p>‘ಪ್ರತಿ ದ್ವಾರ ಬಾಗಿಲು ಬಳಿಯಲ್ಲಿನ ಬುಡ್ಡೆಕಲ್ಲು ದೇವರಿಗೆ ಹೂ, ಹಣ್ಣು, ಕಾಯಿಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ, ಹನ್ನೊಂದು ತನುಬಿಂದಿಗೆಗಳ ಜಲ ಸಹ ಸಮರ್ಪಿಸಲಾಗಿದೆ’ ಎಂದರು.</p>.<p>‘ಪಟ್ಟಣದ ಶಕ್ತಿ ದೇವತೆಗಳಾದ ಯಲ್ಲಮ್ಮ, ದ್ಯಾವಮ್ಮ, ದುರುಗಮ್ಮ, ಸುಂಕ್ಲಮ್ಮ ಹಾಗೂ ಪೆದ್ದಮ್ಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದಲ್ಲಿ ಧಾರ್ಮಿಕ ಶಾಂತಿ ನೆಲೆಸುವಂತೆ ಬೇಡಿಕೊಳ್ಳಲಾಗಿದೆ’ ಎಂದು ಪಟ್ಟಣದ ಮತ್ತೊಬ್ಬ ಹಿರಿಯ ನಾಗರಿಕ ಪ್ರಸಾದ್ ಹೇಳಿದರು.</p>.<p>ಪಟ್ಟಣದ ಮಹಿಳೆಯರು ಕಳಸ ಹಿಡಿದು ಹೂ, ಹಣ್ಣು, ಕರ್ಪೂರ ಮತ್ತು ತೆಂಗಿನ ಕಾಯಿಗಳೊಂದಿಗೆ ಪಟ್ಟಣದ ಏಳು ಅಗಸೆಗಳಿಗೆ ತೆರಳಿ, ಅಗಸೆಗಳಲ್ಲಿನ ಬುಡ್ಡೆಕಲ್ಲು ದೇವರಿಗೆ ಜಲಾಭಿಷೇಕ ಮಾಡಿದರು. ವಿವಿಧ ಭಂಡಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.</p>.<p>ಪಟ್ಟಣದ ನಾಗರಿಕರಾದ ಬಾಬಣ್ಣ, ಗಾದಿಲಿಂಗಪ್ಪ, ಭೀಮೇಶಿ, ಜಡೆಪ್ಪ, ರಾಜಣ್ಣ, ಗೋವಿಂದಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋರಣಗಲ್ಲು:</strong> ಸಮೀಪದ ಕುಡುತಿನಿ ಪಟ್ಟಣಕ್ಕೆ ಕೊರೊನಾ ವೈರಸ್ ಹರಡದಂತೆ ಪಟ್ಟಣದ ನಾಗರಿಕರು ಪಟ್ಟಣದ ಮುಖ್ಯದ್ವಾರದ ಬಾಗಿಲಿಗೆ ನಿಂಬೆಹಣ್ಣು, ಬೇವಿನ ಎಲೆ, ತೆಂಗಿನಕಾಯಿ ಹಾಗೂ ಮೆಣಸಿನಕಾಯಿ ಇರುವ ಬೃಹತ್ ಹಾರವನ್ನು ಕಟ್ಟಿ ಧಾರ್ಮಿಕ ದಿಗ್ಬಂಧನ ಮಂಗಳವಾರ ವಿಧಿಸಿದ್ದಾರೆ.</p>.<p>ಪಟ್ಟಣದ ಹಿರಿಯ ನಾಗರಿಕ ಹನುಮೇಶಿ ಮಾತನಾಡಿ, ‘ಕುಡುತಿನಿ ಪಟ್ಟಣದಲ್ಲಿ ಕೊರೊನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿದ್ದು, ಬಹಳಷ್ಟು ಮಂದಿ ಮೃತಪಟ್ಟಿದ್ದಾರೆ. ಇದನ್ನು ತಡೆಯಲು ಹಾಗೂ<br />ಪಟ್ಟಣದ ಜನರಿಗೆ ದೈವತ್ವದ ಶಕ್ತಿಯು ಕಾಪಾಡಲಿ ಎನ್ನುವ ದೃಷ್ಟಿಯಿಂದ ಪಟ್ಟಣದ ಒಟ್ಟು ಏಳು ಮುಖ್ಯ ದ್ವಾರ ಬಾಗಿಲುಗಳಿಗೆ<br />ಧಾರ್ಮಿಕ ವಿಧಿ ವಿಧಾನದಿಂದ ದಿಗ್ಬಂಧನದ ಹಾರಗಳನ್ನು ಕಟ್ಟಲಾಗಿದೆ’ ಎಂದರು.</p>.<p>‘ಪ್ರತಿ ದ್ವಾರ ಬಾಗಿಲು ಬಳಿಯಲ್ಲಿನ ಬುಡ್ಡೆಕಲ್ಲು ದೇವರಿಗೆ ಹೂ, ಹಣ್ಣು, ಕಾಯಿಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ, ಹನ್ನೊಂದು ತನುಬಿಂದಿಗೆಗಳ ಜಲ ಸಹ ಸಮರ್ಪಿಸಲಾಗಿದೆ’ ಎಂದರು.</p>.<p>‘ಪಟ್ಟಣದ ಶಕ್ತಿ ದೇವತೆಗಳಾದ ಯಲ್ಲಮ್ಮ, ದ್ಯಾವಮ್ಮ, ದುರುಗಮ್ಮ, ಸುಂಕ್ಲಮ್ಮ ಹಾಗೂ ಪೆದ್ದಮ್ಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದಲ್ಲಿ ಧಾರ್ಮಿಕ ಶಾಂತಿ ನೆಲೆಸುವಂತೆ ಬೇಡಿಕೊಳ್ಳಲಾಗಿದೆ’ ಎಂದು ಪಟ್ಟಣದ ಮತ್ತೊಬ್ಬ ಹಿರಿಯ ನಾಗರಿಕ ಪ್ರಸಾದ್ ಹೇಳಿದರು.</p>.<p>ಪಟ್ಟಣದ ಮಹಿಳೆಯರು ಕಳಸ ಹಿಡಿದು ಹೂ, ಹಣ್ಣು, ಕರ್ಪೂರ ಮತ್ತು ತೆಂಗಿನ ಕಾಯಿಗಳೊಂದಿಗೆ ಪಟ್ಟಣದ ಏಳು ಅಗಸೆಗಳಿಗೆ ತೆರಳಿ, ಅಗಸೆಗಳಲ್ಲಿನ ಬುಡ್ಡೆಕಲ್ಲು ದೇವರಿಗೆ ಜಲಾಭಿಷೇಕ ಮಾಡಿದರು. ವಿವಿಧ ಭಂಡಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.</p>.<p>ಪಟ್ಟಣದ ನಾಗರಿಕರಾದ ಬಾಬಣ್ಣ, ಗಾದಿಲಿಂಗಪ್ಪ, ಭೀಮೇಶಿ, ಜಡೆಪ್ಪ, ರಾಜಣ್ಣ, ಗೋವಿಂದಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>