ಬಳ್ಳಾರಿಯಿಂದ ಹೊಸಪೇಟೆ ನಗರಕ್ಕೆ ಬರುವ ಕೆಎಸ್ಆರ್ಟಿಸಿ ಬಸ್ ಹಾಗೂ ಇತರೆ ವಾಹನಗಳು ಬಳ್ಳಾರಿ ರಸ್ತೆಯ ಇಂಗಳಗಿ ಕ್ರಾಸ್ನಿಂದ ಬೈಪಾಸ್ ಮೂಲಕ ಜಂಬುನಾಥ ಗುಡ್ಡ ಬೈಪಾಸ್ ರಸ್ತೆ ಸರ್ಕಲ್, ಕಲ್ಲಹಳ್ಳಿ ಚೆಕ್ಪೋಸ್ಟ್ ಸರ್ಕಲ್ನಿಂದ ಸಂಡೂರು ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬೇಕು. ನಗರದಿಂದ ಬಳ್ಳಾರಿ ಕಡೆಗೆ ಹೋಗುವ ವಾಹನಗಳು ಬಳ್ಳಾರಿ ರಸ್ತೆ ಸರ್ಕಲ್, ಎಚ್ಎಲ್ಸಿ ಕಾಲುವೆ ಸೇತುವೆ, ಆಶ್ರಯ ಕಾಲೊನಿ, ಇಂಗಳಗಿ ಕ್ರಾಸ್ ಬೈಪಾಸ್ ಮೂಲಕ ಸಂಚರಿಸಬೇಕು. ರಸ್ತೆ ಸುರಕ್ಷತೆ, ಸುಗಮ ವಾಹನ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.