ಸ್ಥಳೀಯರು ಪರಿಸರವಾದಿಗಳು ಎದ್ದೇಳಬೇಕು...
‘ಅಲ್ಲಿರುವ (ಸಂಡೂರು) ಜನ ಮೊದಲು ವಿರೋಧಿಸಬೇಕು. ನಾವು ಬಡ್ಕೊಳ್ಳೋದು ಅವರು ತೆಪ್ಪಗೆ ಇರೋದು ಸರಿಯಲ್ಲ. ಕಾವೇರಿ ನೀರಿಗಾಗಿ ಬೆಂಗಳೂರಿನ ಜನ ಸಮ್ಮನಿರ್ತಾರಲ್ಲ ಹಾಗೇ ಇದೂ ಆಗಬಾರದು. ಮೂಲ ನಿವಾಸಿಗಳು ಅರಚಬೇಕು... ಹೀಗೆಂದು ಜ್ಞಾನ್ (@GyanTtr)’ ಎಂಬುವವರು ಪೋಸ್ಟ್ ಮಾಡಿ ಸ್ಥಳೀಯ ಹೋರಾಟಗಾರರನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ್ದಾರೆ. ‘ದಯವಿಟ್ಟು ಸ್ಥಳೀಯರು ಹೋರಾಟ ಮಾಡಿ ಯಾದರೂ ಸಂಡೂರಿನ ಪ್ರಕೃತಿಕ ಸೌಂದರ್ಯ ಉಳಿಸಬೇಕು’ ಎಂದು ತಪಸ್ವಿ (@Tapaswiji1993) ಎಂಬುವವರು ಅಭಿಪ್ರಾಯಪಟ್ಟಿದ್ದಾರೆ. ‘ಹೇಳೋರು ಕೇಳೋರು ಯಾರು ಇಲ್ಲ. ಇರೋ ಬೆಟ್ಟಗಳನ್ನೆಲ್ಲ ಬಗೆದು ಬರದ ನಾಡು ಮಾಡಲು ಹೊರಟಿದ್ದಾರೆ. ಇದನ್ನು ಸಾಮಾನ್ಯ ಜನ ಮತ್ತು ಪರಿಸರ ಹೋರಾಟಗಾರರು ವಿರೋಧಿಸಬೇಕು’ ಎಂದು ಗಿರೀಶ (@BellaryNaga55) ಎಂಬುವವರು ಒತ್ತಾಯಿಸಿದ್ದಾರೆ.