<p><strong>ತೆಕ್ಕಲಕೋಟೆ</strong>: ಪಟ್ಟಣದ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಧನುರ್ಮಾಸ ಪೂಜಾ ಕಾರ್ಯಕ್ರಮ ಸಮಾರೋಪ ಹಾಗೂ 29ನೇ ವರ್ಷದ ಕುಂಭೋತ್ಸವ ಕಾರ್ಯಕ್ರಮವು ಚಿಪ್ಪಿಗ ಸಮಾಜದ ಬಂಧುಗಳಿಂದ ಸಂಭ್ರಮದಿಂದ ಭಾನುವಾರ ಜರುಗಿತು.</p>.<p>ಬೆಳಿಗ್ಗೆ ಕಾಡಸಿದ್ದೇಶ್ವರ ದೇವಸ್ಥಾನ ಆವರಣದ ಮುಂದಿನ ಬಾವಿಗೆ ಗಂಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ 10 ಜನ ಮಹಿಳೆಯರಿಗೆ ಉಡಿ ತುಂಬಿ ವಿಶೇಷ ಪೂಜೆಯ ನಂತರ 18 ಪೂರ್ಣಕುಂಭ ಹೊತ್ತ ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.</p>.<p>ತಾಷ, ತಪ್ಪಡಿ, ಸಮಾಳ, ನಂದಿಕೋಲು, ವೀರಗಾಸೆ ಹಾಗೂ ಸಕಲ ಮಂಗಳ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರಿಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ದೇವಸ್ಥಾನದಲ್ಲಿ ಶಂಕರಲಿಂಗ ಮೂರ್ತಿಗೆ ಮಹಾ ಅಭಿಷೇಕ, ಸಹಜ್ರ ನಾಮಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು.</p>.<p>ಕುಮಾರಿ ಸಾನಿಧ್ಯ ಹಾಗೂ ಕುಮಾರಿ ಪ್ರಜ್ಞ ಇವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.<br /> ಕಾರ್ಯಕ್ರಮದಲ್ಲಿ ಚಿಪ್ಪಿಗ ಸಮಾಜದ ಮುಖಂಡರಾದ ಶಾಬಾದಿ ಶಿವಲಿಂಗಪ್ಪ, ಮಲ್ಲಯ್ಯ ಎನ್, ಶ್ರೀಪಾದ ಶಾಬಾದಿ, ಸುಧಾಕರ, ವೀರೆಂದ್ರ ಎಸ್, ಶಾಬಾದಿ ಪ್ರಸಾದ್, ಸಿದ್ದಲಿಂಗೇಶ್ವರ, ರಮೇಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಪಟ್ಟಣದ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಧನುರ್ಮಾಸ ಪೂಜಾ ಕಾರ್ಯಕ್ರಮ ಸಮಾರೋಪ ಹಾಗೂ 29ನೇ ವರ್ಷದ ಕುಂಭೋತ್ಸವ ಕಾರ್ಯಕ್ರಮವು ಚಿಪ್ಪಿಗ ಸಮಾಜದ ಬಂಧುಗಳಿಂದ ಸಂಭ್ರಮದಿಂದ ಭಾನುವಾರ ಜರುಗಿತು.</p>.<p>ಬೆಳಿಗ್ಗೆ ಕಾಡಸಿದ್ದೇಶ್ವರ ದೇವಸ್ಥಾನ ಆವರಣದ ಮುಂದಿನ ಬಾವಿಗೆ ಗಂಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ 10 ಜನ ಮಹಿಳೆಯರಿಗೆ ಉಡಿ ತುಂಬಿ ವಿಶೇಷ ಪೂಜೆಯ ನಂತರ 18 ಪೂರ್ಣಕುಂಭ ಹೊತ್ತ ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.</p>.<p>ತಾಷ, ತಪ್ಪಡಿ, ಸಮಾಳ, ನಂದಿಕೋಲು, ವೀರಗಾಸೆ ಹಾಗೂ ಸಕಲ ಮಂಗಳ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರಿಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ದೇವಸ್ಥಾನದಲ್ಲಿ ಶಂಕರಲಿಂಗ ಮೂರ್ತಿಗೆ ಮಹಾ ಅಭಿಷೇಕ, ಸಹಜ್ರ ನಾಮಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು.</p>.<p>ಕುಮಾರಿ ಸಾನಿಧ್ಯ ಹಾಗೂ ಕುಮಾರಿ ಪ್ರಜ್ಞ ಇವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.<br /> ಕಾರ್ಯಕ್ರಮದಲ್ಲಿ ಚಿಪ್ಪಿಗ ಸಮಾಜದ ಮುಖಂಡರಾದ ಶಾಬಾದಿ ಶಿವಲಿಂಗಪ್ಪ, ಮಲ್ಲಯ್ಯ ಎನ್, ಶ್ರೀಪಾದ ಶಾಬಾದಿ, ಸುಧಾಕರ, ವೀರೆಂದ್ರ ಎಸ್, ಶಾಬಾದಿ ಪ್ರಸಾದ್, ಸಿದ್ದಲಿಂಗೇಶ್ವರ, ರಮೇಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>