<p><strong>ಸಿರುಗುಪ್ಪ</strong>: ‘ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಜ್ಞಾನದ ದಾಸೋಹ ನೀಡಿದ ಸಿದ್ಧಗಂಗೆಯ ದಿ.ಶಿವಕುಮಾರ ಸ್ವಾಮೀಜಿ, ಇಡೀ ಮನುಜ ಕುಲಕ್ಕೆ ದಾರಿದೀಪವಾಗಿದ್ದಾರೆ’ ಎಂದು ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಮಹಾಂತಶಿವಯೋಗಿಗಳ ಮಠದಲ್ಲಿ ‘ಸಿದ್ದಗಂಗೆಯ ಡಾ.ಶಿವಕುಮಾರ ಮಹಾಸ್ವಾಮೀಜಿಯ’ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಸಾಮಾನ್ಯ ಮನುಷ್ಯರಾಗಿ ಜನಿಸಿದ ಸ್ವಾಮೀಜಿ ತಮ್ಮ ಜೀವನಾದರ್ಶಗಳಿಂದ ಗುರು ಭಕ್ತಿ, ನಿತ್ಯ ಕಾಯಕ, ಲಿಂಗನಿಷ್ಠೇಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.</p>.<p>ಹಾಲ್ವಿ ಕರ್ಚಿಗನೂರು ಮಠದ ಪೀಠಾಧ್ಯಕ್ಷರಾದ ಅಭಿನವ ಮಹಾಂತಸ್ವಾಮೀಜಿ ಶ್ರಮದಿಂದ ಸಿದ್ದಗಂಗೆ ಶಿವಕುಮಾರಸ್ವಾಮಿಜೀಗಳ ಪುರಾಣ ರಚನೆಗೊಂಡಿದ್ದು ಪ್ರಾಯೋಗಿಕವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶ್ರೀಮಠದಲ್ಲಿ ಪುರಾಣ ಆಯೋಜಿಸಿರುವುದು ಐತಿಹಾಸಿಕವಾಗಿದೆ ಎಂದು ಸ್ಮರಿಸಿದರು.</p>.<p>ಹಾಲ್ವಿ ಕರ್ಚಿಗನೂರು ಮಠದ ಪೀಠಾಧ್ಯಕ್ಷ ಅಭಿನವ ಮಹಾಂತಸ್ವಾಮೀಜಿ, ಸಿರುಗುಪ್ಪ ಗುರುಬಸವಮಠಾಧ್ಯಕ್ಷ ಬಸವಭೂಷಣಸ್ವಾಮೀಜಿ, ಮಹಾಂತ ದೇವರು, ಸದಾಶಿವಸ್ವಾಮೀಜಿ, ಬಸವಬಳಗದ ಬಸವರಾಜಪ್ಪಶರಣ, ಪುರಾಣ ಪ್ರವಚನಕಾರ ತಿಮ್ಮಲಾಪುರ ಕಲ್ಯಾಣಾಶ್ರಮದ ಮಹಾಂತಸ್ವಾಮೀಜಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ‘ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಜ್ಞಾನದ ದಾಸೋಹ ನೀಡಿದ ಸಿದ್ಧಗಂಗೆಯ ದಿ.ಶಿವಕುಮಾರ ಸ್ವಾಮೀಜಿ, ಇಡೀ ಮನುಜ ಕುಲಕ್ಕೆ ದಾರಿದೀಪವಾಗಿದ್ದಾರೆ’ ಎಂದು ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಮಹಾಂತಶಿವಯೋಗಿಗಳ ಮಠದಲ್ಲಿ ‘ಸಿದ್ದಗಂಗೆಯ ಡಾ.ಶಿವಕುಮಾರ ಮಹಾಸ್ವಾಮೀಜಿಯ’ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಸಾಮಾನ್ಯ ಮನುಷ್ಯರಾಗಿ ಜನಿಸಿದ ಸ್ವಾಮೀಜಿ ತಮ್ಮ ಜೀವನಾದರ್ಶಗಳಿಂದ ಗುರು ಭಕ್ತಿ, ನಿತ್ಯ ಕಾಯಕ, ಲಿಂಗನಿಷ್ಠೇಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.</p>.<p>ಹಾಲ್ವಿ ಕರ್ಚಿಗನೂರು ಮಠದ ಪೀಠಾಧ್ಯಕ್ಷರಾದ ಅಭಿನವ ಮಹಾಂತಸ್ವಾಮೀಜಿ ಶ್ರಮದಿಂದ ಸಿದ್ದಗಂಗೆ ಶಿವಕುಮಾರಸ್ವಾಮಿಜೀಗಳ ಪುರಾಣ ರಚನೆಗೊಂಡಿದ್ದು ಪ್ರಾಯೋಗಿಕವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶ್ರೀಮಠದಲ್ಲಿ ಪುರಾಣ ಆಯೋಜಿಸಿರುವುದು ಐತಿಹಾಸಿಕವಾಗಿದೆ ಎಂದು ಸ್ಮರಿಸಿದರು.</p>.<p>ಹಾಲ್ವಿ ಕರ್ಚಿಗನೂರು ಮಠದ ಪೀಠಾಧ್ಯಕ್ಷ ಅಭಿನವ ಮಹಾಂತಸ್ವಾಮೀಜಿ, ಸಿರುಗುಪ್ಪ ಗುರುಬಸವಮಠಾಧ್ಯಕ್ಷ ಬಸವಭೂಷಣಸ್ವಾಮೀಜಿ, ಮಹಾಂತ ದೇವರು, ಸದಾಶಿವಸ್ವಾಮೀಜಿ, ಬಸವಬಳಗದ ಬಸವರಾಜಪ್ಪಶರಣ, ಪುರಾಣ ಪ್ರವಚನಕಾರ ತಿಮ್ಮಲಾಪುರ ಕಲ್ಯಾಣಾಶ್ರಮದ ಮಹಾಂತಸ್ವಾಮೀಜಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>