<p><strong>ಹೂವಿನಹಡಗಲಿ</strong>: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿದ್ದ ರೈತರ ಜಮೀನುಗಳಿಗೆ ₹ 5.88 ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.</p>.<p>‘ಸದ್ಯ ನಂದಿಹಳ್ಳಿ, ಮುದೇನೂರು, ಹೊಳಗುಂದಿ, ದಾಸರಹಳ್ಳಿ, 60-ಹಾಳ್ ತಿಮ್ಮಲಾಪುರ, 60-ತಿಮ್ಮಲಾಪುರ, ನವಲಿ ಗ್ರಾಮಗಳ 136 ರೈತರ 92.08 ಎಕರೆ ಜಮೀನಿಗೆ ಭೂ ಪರಿಹಾರ ಬಿಡುಗಡೆಯಾಗಿದೆ. ಇಂದು ಮುದೇನೂರು, ನಂದಿಹಳ್ಳಿ, ಹೊಳಗುಂದಿ, ದಾಸರಹಳ್ಳಿಯ 26 ರೈತರಿಗೆ 1.31 ಕೋಟಿ ರೂ. ಚೆಕ್ ವಿತರಿಸಿದ್ದೇವೆ. ಉಳಿದ ರೈತರಿಗೆ ನಂತರ ವಿತರಿಸುತ್ತೇವೆ’ ಎಂದು ಹೇಳಿದರು.</p>.<p>‘ಜಮೀನು ಸ್ವಾಧೀನಪಡಿಸಿಕೊಂಡು 16 ವರ್ಷಗಳಾಗಿವೆ. ಬಾಕಿ ಉಳಿದಿರುವ ಎಲ್ಲ ಪ್ರಕರಣಗಳಿಗೂ ಪರಿಹಾರ ಕೊಡಿಸುತ್ತೇವೆ. ರೈತರು ನೇರ ಖರೀದಿಗೆ ಒಪ್ಪಿದರೆ ಶೀಘ್ರ ಪರಿಹಾರ ಪಡೆಯಬಹುದು. ಒಪ್ಪಿತವಾಗದಿದ್ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮೂಲಕ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.</p>.<p>ತಹಶೀಲ್ದಾರ್ ಅಂಬರೀಷ, ವಿಶೇಷ ಭೂ ಸ್ವಾಧೀನ ಕಚೇರಿ ಸಿಬ್ಬಂದಿ ಶೆಕ್ಷಾವಲಿ, ಬಾಷಾ, ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿದ್ದ ರೈತರ ಜಮೀನುಗಳಿಗೆ ₹ 5.88 ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.</p>.<p>‘ಸದ್ಯ ನಂದಿಹಳ್ಳಿ, ಮುದೇನೂರು, ಹೊಳಗುಂದಿ, ದಾಸರಹಳ್ಳಿ, 60-ಹಾಳ್ ತಿಮ್ಮಲಾಪುರ, 60-ತಿಮ್ಮಲಾಪುರ, ನವಲಿ ಗ್ರಾಮಗಳ 136 ರೈತರ 92.08 ಎಕರೆ ಜಮೀನಿಗೆ ಭೂ ಪರಿಹಾರ ಬಿಡುಗಡೆಯಾಗಿದೆ. ಇಂದು ಮುದೇನೂರು, ನಂದಿಹಳ್ಳಿ, ಹೊಳಗುಂದಿ, ದಾಸರಹಳ್ಳಿಯ 26 ರೈತರಿಗೆ 1.31 ಕೋಟಿ ರೂ. ಚೆಕ್ ವಿತರಿಸಿದ್ದೇವೆ. ಉಳಿದ ರೈತರಿಗೆ ನಂತರ ವಿತರಿಸುತ್ತೇವೆ’ ಎಂದು ಹೇಳಿದರು.</p>.<p>‘ಜಮೀನು ಸ್ವಾಧೀನಪಡಿಸಿಕೊಂಡು 16 ವರ್ಷಗಳಾಗಿವೆ. ಬಾಕಿ ಉಳಿದಿರುವ ಎಲ್ಲ ಪ್ರಕರಣಗಳಿಗೂ ಪರಿಹಾರ ಕೊಡಿಸುತ್ತೇವೆ. ರೈತರು ನೇರ ಖರೀದಿಗೆ ಒಪ್ಪಿದರೆ ಶೀಘ್ರ ಪರಿಹಾರ ಪಡೆಯಬಹುದು. ಒಪ್ಪಿತವಾಗದಿದ್ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮೂಲಕ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.</p>.<p>ತಹಶೀಲ್ದಾರ್ ಅಂಬರೀಷ, ವಿಶೇಷ ಭೂ ಸ್ವಾಧೀನ ಕಚೇರಿ ಸಿಬ್ಬಂದಿ ಶೆಕ್ಷಾವಲಿ, ಬಾಷಾ, ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>