<p><strong>ಹೂವಿನಹಡಗಲಿ</strong><strong>: </strong>ಪಟ್ಟಣದ ವಿಜಯನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಲು ಸೂಕ್ತ ದಾರಿಯ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.</p>.<p>ಹಳ್ಳದ ದಂಡೆಯ ಮೇಲಿರುವ ಈ ಸರ್ಕಾರಿ ಶಾಲೆಗೆ ರಾಜೀವ್ ನಗರ, ನಜೀರ್ ನಗರದ ವಿದ್ಯಾರ್ಥಿಗಳು ಹರಸಾಹಸಪಟ್ಟು ಹಳ್ಳ ದಾಟಿಕೊಂಡೇ ಹೋಗಬೇಕಿದೆ. ಸಣ್ಣ ಮಕ್ಕಳು ಯಾವಾಗಲೂ ಹರಿಯುವ ಚರಂಡಿ ತ್ಯಾಜ್ಯ, ಕಶ್ಮಲ, ರೊಜ್ಜು ತುಳಿದುಕೊಂಡೇ ಶಾಲೆಗೆ ತಲುಪುವ ಅನಿವಾರ್ಯತೆ ನಿರ್ಮಾಣವಾಗಿದೆ.</p>.<p>ಮಳೆಗಾಲದಲ್ಲಂತೂ ಸಂಕಷ್ಟ ಹೇಳತೀರದಾಗಿದೆ. ಹಳ್ಳ ರಭಸವಾಗಿ ಹರಿಯುವುದರಿಂದ ಸಣ್ಣ ಮಕ್ಕಳು ಕಿಲೋ ಮೀಟರ್ ಸುತ್ತುವರಿದು ರಾಜೀವ್ ನಗರದ ಕಿರು ಸೇತುವೆ ಮೇಲಿಂದ ಮನೆಗಳನ್ನು ತಲುಪಬೇಕಿದೆ.</p>.<p>‘ಶಾಲಾ ವಿದ್ಯಾರ್ಥಿಗಳು, ನಾಗರಿಕರ ಅನುಕೂಲಕ್ಕಾಗಿ ಈ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.</p>.<p>ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 73 ವಿದ್ಯಾರ್ಥಿಗಳಿದ್ದು, ಮುಖ್ಯಶಿಕ್ಷಕರು ಸೇರಿ ನಾಲ್ಕು ಜನ ಶಿಕ್ಷಕರಿದ್ದಾರೆ.</p>.<p>ಕೂಲಿ ಕಾರ್ಮಿಕರು, ಹಮಾಲರು, ಬಡವರ ಮಕ್ಕಳೇ ಈ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಹಳ್ಳ ದಾಟುವ ಸಮಸ್ಯೆ, ಸುಗಮ ದಾರಿ ಇಲ್ಲದ ಕಾರಣಕ್ಕೆ ಪೋಷಕರು ಈ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.</p>.<p>‘ಕೆಲ ದಿನಗಳ ಹಿಂದೆ ಶೆಕ್ಷಾವಲಿ ಎಂಬ ವಿದ್ಯಾರ್ಥಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾವೆಲ್ಲ ಸೇರಿ ಆತನನ್ನು ರಕ್ಷಿಸಿದೆವು. ದಿನವೂ ಚರಂಡಿ ರೊಜ್ಜು ತುಳಿದುಕೊಂಡು ಶಾಲೆಗೆ ಹೋಗುವುದು ಕಿರಿಕಿರಿ ಎನಿಸುತ್ತಿದೆ’ ಎಂದು 6ನೇ ತರಗತಿ ವಿದ್ಯಾರ್ಥಿ ಚಂದ್ರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong><strong>: </strong>ಪಟ್ಟಣದ ವಿಜಯನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಲು ಸೂಕ್ತ ದಾರಿಯ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.</p>.<p>ಹಳ್ಳದ ದಂಡೆಯ ಮೇಲಿರುವ ಈ ಸರ್ಕಾರಿ ಶಾಲೆಗೆ ರಾಜೀವ್ ನಗರ, ನಜೀರ್ ನಗರದ ವಿದ್ಯಾರ್ಥಿಗಳು ಹರಸಾಹಸಪಟ್ಟು ಹಳ್ಳ ದಾಟಿಕೊಂಡೇ ಹೋಗಬೇಕಿದೆ. ಸಣ್ಣ ಮಕ್ಕಳು ಯಾವಾಗಲೂ ಹರಿಯುವ ಚರಂಡಿ ತ್ಯಾಜ್ಯ, ಕಶ್ಮಲ, ರೊಜ್ಜು ತುಳಿದುಕೊಂಡೇ ಶಾಲೆಗೆ ತಲುಪುವ ಅನಿವಾರ್ಯತೆ ನಿರ್ಮಾಣವಾಗಿದೆ.</p>.<p>ಮಳೆಗಾಲದಲ್ಲಂತೂ ಸಂಕಷ್ಟ ಹೇಳತೀರದಾಗಿದೆ. ಹಳ್ಳ ರಭಸವಾಗಿ ಹರಿಯುವುದರಿಂದ ಸಣ್ಣ ಮಕ್ಕಳು ಕಿಲೋ ಮೀಟರ್ ಸುತ್ತುವರಿದು ರಾಜೀವ್ ನಗರದ ಕಿರು ಸೇತುವೆ ಮೇಲಿಂದ ಮನೆಗಳನ್ನು ತಲುಪಬೇಕಿದೆ.</p>.<p>‘ಶಾಲಾ ವಿದ್ಯಾರ್ಥಿಗಳು, ನಾಗರಿಕರ ಅನುಕೂಲಕ್ಕಾಗಿ ಈ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.</p>.<p>ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 73 ವಿದ್ಯಾರ್ಥಿಗಳಿದ್ದು, ಮುಖ್ಯಶಿಕ್ಷಕರು ಸೇರಿ ನಾಲ್ಕು ಜನ ಶಿಕ್ಷಕರಿದ್ದಾರೆ.</p>.<p>ಕೂಲಿ ಕಾರ್ಮಿಕರು, ಹಮಾಲರು, ಬಡವರ ಮಕ್ಕಳೇ ಈ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಹಳ್ಳ ದಾಟುವ ಸಮಸ್ಯೆ, ಸುಗಮ ದಾರಿ ಇಲ್ಲದ ಕಾರಣಕ್ಕೆ ಪೋಷಕರು ಈ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.</p>.<p>‘ಕೆಲ ದಿನಗಳ ಹಿಂದೆ ಶೆಕ್ಷಾವಲಿ ಎಂಬ ವಿದ್ಯಾರ್ಥಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾವೆಲ್ಲ ಸೇರಿ ಆತನನ್ನು ರಕ್ಷಿಸಿದೆವು. ದಿನವೂ ಚರಂಡಿ ರೊಜ್ಜು ತುಳಿದುಕೊಂಡು ಶಾಲೆಗೆ ಹೋಗುವುದು ಕಿರಿಕಿರಿ ಎನಿಸುತ್ತಿದೆ’ ಎಂದು 6ನೇ ತರಗತಿ ವಿದ್ಯಾರ್ಥಿ ಚಂದ್ರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>