<p><strong>ಹರಪನಹಳ್ಳಿ:</strong> ‘ಮೌಢ್ಯ ನಿವಾರಣೆಗೆ ಶ್ರಮಿಸಿದ ಕೆಲವೇ ಮಠಗಳಲ್ಲಿ ಸಿರಿಗೆರೆ ತರಳಬಾಳು ಮಠ ಪ್ರಮುಖವಾದದ್ದು’ ಎಂದು ಎಚ್ಪಿಎಸ್ ಪಿಯು ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರ ಗೌಡ್ರು ತಿಳಿಸಿದರು.</p>.<p>ಪಟ್ಟಣದ ಎಚ್ಪಿಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಳಬಾಳು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 32ನೇ ವರ್ಷದ ಪುಣ್ಯಸ್ಮರಣೆ, ಕಾಲೇಜಿನ 2024-25ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಿರಿಗೆರೆ ತರಳಬಾಳು ಮಠ ಸಮಾಜಮುಖಿ ಕಾರ್ಯಗಳು, ವೈಚಾರಿಕತೆ ಪ್ರಚುರಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಶಿವಕುಮಾರ ಶಿವಾಚಾರ್ಯರಿಗೆ ಸಲ್ಲುತ್ತದೆ’ ಎಂದರು.</p>.<p>‘ಶ್ರೀಗಳು ಆರಂಭಿಸಿದ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಚಿತವಾಗಿ ವಿದ್ಯಾರ್ಥಿ ನಿಲಯದ ಸೌಲಭ್ಯ ಕಲ್ಪಿಸಿ, ಸಹಪಂಕ್ತಿ ಭೋಜನೆ ಆರಂಭಿಸಿದರು. ಅಸ್ಪೃಶ್ಯತೆ ನಿವಾರಣೆಗೆ ಒತ್ತು ನೀಡಿ, ಸಮಾನತೆ ಸಾರಿದರು’ ಎಂದು ತಿಳಿಸಿದರು.</p>.<p>ನೃತ್ಯ, ಕಿರುನಾಟಕ, ಅಭಿನಯ, ರಸಪ್ರಶ್ನೆ, ಸುಂದರ ಬರವಣಿಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಪ್ರಭುಲಿಂಗಪ್ಪ ಸಿ.ಹಲಗೇರೆ ಉಪನ್ಯಾಸ ನೀಡಿದರು. ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಗುಂಡಗತ್ತಿ ಮಂಜುನಾಥ ಉದ್ಘಾಟಿಸಿದರು. ವಲಯ ಅಧಿಕಾರಿ ಸಿ.ಎಸ್.ಬಸವರಾಜ್, ಸಿದ್ದಪ್ಪ, ಪ್ರಾಚಾರ್ಯ ಮಂಜುನಾಥ ಸಿ. ಬೆನಕನಕೊಂಡ, ಕೆ.ಜಿ.ಶಿವಯೋಗಿ, ಬಿ.ರೇವಣಗೌಡ್ರು, ಮುತ್ತೇಶ್, ಉದಯಕುಮಾರ್, ಮಂಜುನಾಥ್, ಸಿ.ಎಸ್.ಬಸವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ:</strong> ‘ಮೌಢ್ಯ ನಿವಾರಣೆಗೆ ಶ್ರಮಿಸಿದ ಕೆಲವೇ ಮಠಗಳಲ್ಲಿ ಸಿರಿಗೆರೆ ತರಳಬಾಳು ಮಠ ಪ್ರಮುಖವಾದದ್ದು’ ಎಂದು ಎಚ್ಪಿಎಸ್ ಪಿಯು ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರ ಗೌಡ್ರು ತಿಳಿಸಿದರು.</p>.<p>ಪಟ್ಟಣದ ಎಚ್ಪಿಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಳಬಾಳು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 32ನೇ ವರ್ಷದ ಪುಣ್ಯಸ್ಮರಣೆ, ಕಾಲೇಜಿನ 2024-25ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಿರಿಗೆರೆ ತರಳಬಾಳು ಮಠ ಸಮಾಜಮುಖಿ ಕಾರ್ಯಗಳು, ವೈಚಾರಿಕತೆ ಪ್ರಚುರಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಶಿವಕುಮಾರ ಶಿವಾಚಾರ್ಯರಿಗೆ ಸಲ್ಲುತ್ತದೆ’ ಎಂದರು.</p>.<p>‘ಶ್ರೀಗಳು ಆರಂಭಿಸಿದ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಚಿತವಾಗಿ ವಿದ್ಯಾರ್ಥಿ ನಿಲಯದ ಸೌಲಭ್ಯ ಕಲ್ಪಿಸಿ, ಸಹಪಂಕ್ತಿ ಭೋಜನೆ ಆರಂಭಿಸಿದರು. ಅಸ್ಪೃಶ್ಯತೆ ನಿವಾರಣೆಗೆ ಒತ್ತು ನೀಡಿ, ಸಮಾನತೆ ಸಾರಿದರು’ ಎಂದು ತಿಳಿಸಿದರು.</p>.<p>ನೃತ್ಯ, ಕಿರುನಾಟಕ, ಅಭಿನಯ, ರಸಪ್ರಶ್ನೆ, ಸುಂದರ ಬರವಣಿಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಪ್ರಭುಲಿಂಗಪ್ಪ ಸಿ.ಹಲಗೇರೆ ಉಪನ್ಯಾಸ ನೀಡಿದರು. ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಗುಂಡಗತ್ತಿ ಮಂಜುನಾಥ ಉದ್ಘಾಟಿಸಿದರು. ವಲಯ ಅಧಿಕಾರಿ ಸಿ.ಎಸ್.ಬಸವರಾಜ್, ಸಿದ್ದಪ್ಪ, ಪ್ರಾಚಾರ್ಯ ಮಂಜುನಾಥ ಸಿ. ಬೆನಕನಕೊಂಡ, ಕೆ.ಜಿ.ಶಿವಯೋಗಿ, ಬಿ.ರೇವಣಗೌಡ್ರು, ಮುತ್ತೇಶ್, ಉದಯಕುಮಾರ್, ಮಂಜುನಾಥ್, ಸಿ.ಎಸ್.ಬಸವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>