<p>ಕಂಪ್ಲಿ: ಇಲ್ಲಿನ ಹಳೆ ಬಸ್ನಿಲ್ದಾಣದಲ್ಲಿ ಸ್ಥಳೀಯ ನಿವಾಸಿಗಳಾದ ತೇರಿನಮನೆ ಹೋಟೆಲ್ ಬಸವರಾಜ ಮತ್ತು ಬಿ.ಎಂ. ಕೇದಾರನಾಥ ಅವರು ಡಿ.17ರಂದು ಬಳ್ಳಾರಿ ಬಸ್ ಏರುವಾಗ ಕಳವಾಗಿದ್ದ ಅವರ ಮೊಬೈಲ್ನಿಂದ ₹1.20ಲಕ್ಷ ವರ್ಗಾವಣೆಯಾಗಿದೆ.</p>.<p>ಮೊಬೈಲ್ ಕಳವು ಮಾಡಿದವರು ಬಸವರಾಜ ಅವರ ಖಾತೆಯ ಹಣವನ್ನು ಡಿ.17ರಂದು ಮೊಬೈಲ್ ಮೂಲಕವೇ ₹ 5,000 ಅನ್ನು ವಿ. ರಾಮಸ್ವಾಮಿಗೆ, ಡಿ.18ರ ಮಧ್ಯರಾತ್ರಿ 12ಕ್ಕೆ ₹ 10,000 ಅನ್ನು ಕೇದಾರನಾಥಗೆ, ₹50,000 ಜೆ ಅಂಡ್ ಕೆ ವಾಶೀಮ್ ಅಹಮದ್ಗೆ, ₹ 40,000 ಜೆ ಅಂಡ್ ಕೆ ಫಾರೂಕ್ ಅಹಮದ್ ಎಂಬುವವರಿಗೆ ವರ್ಗಾಯಿಸಿದ್ದಾರೆ. <br> ಅದೇ ರೀತಿ ಬಿ.ಎಂ. ಕೇದಾರನಾಥ ಅವರ ಖಾತೆಯಿಂದ ಡಿ.18ರಂದು ₹ 1,000, ₹ 14,000 ಕ್ರಮವಾಗಿ ಆಂಧ್ರಪ್ರದೇಶದ ಮೈಲೂರಿನ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದಾರೆ. </p>.<p>ಮೊಬೈಲ್ ಕಳವು ಬಳಿಕ ಇಬ್ಬರು ಹೊಸ ಮೊಬೈಲ್, ಸಿಮ್ ಖರೀದಿಸಿದಾಗ ಹಣ ವರ್ಗಾವಣೆಯಾಗಿರುವುದು ಖಚಿತಪಟ್ಟಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸಂಬಂಧಿಸಿದ ದಾಖಲೆ, ಇತರೆ ಮಾಹಿತಿ ಒದಗಿಸಿರುವುದಾಗಿ ಬಸವರಾಜ ಮತ್ತು ಬಿ.ಎಂ. ಕೇದಾರನಾಥ ಶುಕ್ರವಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ಇಲ್ಲಿನ ಹಳೆ ಬಸ್ನಿಲ್ದಾಣದಲ್ಲಿ ಸ್ಥಳೀಯ ನಿವಾಸಿಗಳಾದ ತೇರಿನಮನೆ ಹೋಟೆಲ್ ಬಸವರಾಜ ಮತ್ತು ಬಿ.ಎಂ. ಕೇದಾರನಾಥ ಅವರು ಡಿ.17ರಂದು ಬಳ್ಳಾರಿ ಬಸ್ ಏರುವಾಗ ಕಳವಾಗಿದ್ದ ಅವರ ಮೊಬೈಲ್ನಿಂದ ₹1.20ಲಕ್ಷ ವರ್ಗಾವಣೆಯಾಗಿದೆ.</p>.<p>ಮೊಬೈಲ್ ಕಳವು ಮಾಡಿದವರು ಬಸವರಾಜ ಅವರ ಖಾತೆಯ ಹಣವನ್ನು ಡಿ.17ರಂದು ಮೊಬೈಲ್ ಮೂಲಕವೇ ₹ 5,000 ಅನ್ನು ವಿ. ರಾಮಸ್ವಾಮಿಗೆ, ಡಿ.18ರ ಮಧ್ಯರಾತ್ರಿ 12ಕ್ಕೆ ₹ 10,000 ಅನ್ನು ಕೇದಾರನಾಥಗೆ, ₹50,000 ಜೆ ಅಂಡ್ ಕೆ ವಾಶೀಮ್ ಅಹಮದ್ಗೆ, ₹ 40,000 ಜೆ ಅಂಡ್ ಕೆ ಫಾರೂಕ್ ಅಹಮದ್ ಎಂಬುವವರಿಗೆ ವರ್ಗಾಯಿಸಿದ್ದಾರೆ. <br> ಅದೇ ರೀತಿ ಬಿ.ಎಂ. ಕೇದಾರನಾಥ ಅವರ ಖಾತೆಯಿಂದ ಡಿ.18ರಂದು ₹ 1,000, ₹ 14,000 ಕ್ರಮವಾಗಿ ಆಂಧ್ರಪ್ರದೇಶದ ಮೈಲೂರಿನ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದಾರೆ. </p>.<p>ಮೊಬೈಲ್ ಕಳವು ಬಳಿಕ ಇಬ್ಬರು ಹೊಸ ಮೊಬೈಲ್, ಸಿಮ್ ಖರೀದಿಸಿದಾಗ ಹಣ ವರ್ಗಾವಣೆಯಾಗಿರುವುದು ಖಚಿತಪಟ್ಟಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸಂಬಂಧಿಸಿದ ದಾಖಲೆ, ಇತರೆ ಮಾಹಿತಿ ಒದಗಿಸಿರುವುದಾಗಿ ಬಸವರಾಜ ಮತ್ತು ಬಿ.ಎಂ. ಕೇದಾರನಾಥ ಶುಕ್ರವಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>