<p><strong>ಹಗರಿಬೊಮ್ಮನಹಳ್ಳಿ</strong>: ಟ್ರ್ಯಾಕ್ಟರ್ ಬಂಪರ್ ಮುರಿದ ಪರಿಣಾಮ ಟ್ರೈಲರ್ನಲ್ಲಿ ಇದ್ದವರು ಕೆಳಗೆ ಬಿದ್ದು ತಾಲ್ಲೂಕಿನ ಆನೇಕಲ್ಲು ತಾಂಡಾದ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಹೊರ ವಲಯದ ರಾಯಚೂರು- ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.</p>.<p>ರುಕ್ಮಿಣಿಬಾಯಿ(28), ಶಿವಾನಿನಾಯ್ಕ(6), ರೋಷನ್ ನಾಯ್ಕ(4) ಸ್ಥಳದಲ್ಲಿಯೇ ಮೃತಪಟ್ಟರೆ, ಪಾಂಡುನಾಯ್ಕ(30) ಬಾಗಲಕೋಟೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.</p>.<p>ತಾಂಡಾದಿಂದ ಕಬ್ಬು ಕಟಾವು ಮಾಡಲು ಮೂರು ಕುಟುಂಬಗಳು ತೆರಳಿದ್ದವು. ಗ್ರಾಮದಲ್ಲಿ ದುರ್ಗಾಂಬಿಕಾ ಹಬ್ಬ ಇರುವ ಕಾರಣ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ. ಕಮತಗಿಯಿಂದ ಬಾಗಲಕೋಟೆ ಕಡೆಗೆ ತೆರಳುತ್ತಿದ್ದರು. ರುಕ್ಮಣಿಬಾಯಿ ಗರ್ಭಿಣಿ ಇದ್ದರು, ಹೊಟ್ಟೆಯಲ್ಲಿದ್ದ 9 ತಿಂಗಳ ಶಿಶು ಕೂಡ ಮೃತಪಟ್ಟಿದೆ. ಈ ಕುರಿತಂತೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ</strong>: ಟ್ರ್ಯಾಕ್ಟರ್ ಬಂಪರ್ ಮುರಿದ ಪರಿಣಾಮ ಟ್ರೈಲರ್ನಲ್ಲಿ ಇದ್ದವರು ಕೆಳಗೆ ಬಿದ್ದು ತಾಲ್ಲೂಕಿನ ಆನೇಕಲ್ಲು ತಾಂಡಾದ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಹೊರ ವಲಯದ ರಾಯಚೂರು- ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.</p>.<p>ರುಕ್ಮಿಣಿಬಾಯಿ(28), ಶಿವಾನಿನಾಯ್ಕ(6), ರೋಷನ್ ನಾಯ್ಕ(4) ಸ್ಥಳದಲ್ಲಿಯೇ ಮೃತಪಟ್ಟರೆ, ಪಾಂಡುನಾಯ್ಕ(30) ಬಾಗಲಕೋಟೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.</p>.<p>ತಾಂಡಾದಿಂದ ಕಬ್ಬು ಕಟಾವು ಮಾಡಲು ಮೂರು ಕುಟುಂಬಗಳು ತೆರಳಿದ್ದವು. ಗ್ರಾಮದಲ್ಲಿ ದುರ್ಗಾಂಬಿಕಾ ಹಬ್ಬ ಇರುವ ಕಾರಣ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ. ಕಮತಗಿಯಿಂದ ಬಾಗಲಕೋಟೆ ಕಡೆಗೆ ತೆರಳುತ್ತಿದ್ದರು. ರುಕ್ಮಣಿಬಾಯಿ ಗರ್ಭಿಣಿ ಇದ್ದರು, ಹೊಟ್ಟೆಯಲ್ಲಿದ್ದ 9 ತಿಂಗಳ ಶಿಶು ಕೂಡ ಮೃತಪಟ್ಟಿದೆ. ಈ ಕುರಿತಂತೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>