ಅಕ್ಟೋಬರ್, ನವೆಂಬರ್ನಲ್ಲಿ ಹೆಚ್ಚುವರಿ ಮಳೆ ಬರದಿದ್ದಲ್ಲಿ ಬೇಸಿಗೆ ಬೆಳೆಗೆ ನೀರು ಸಿಗುವುದಿಲ್ಲ. ಆಣೆಕಟ್ಟಿನ ಗೇಟ್ ಮುರಿದು ಬಿದ್ದಿರುವುದು ರೈತರಿಗೆ ಆತಂಕಕಾರಿ ವಿಷಯವಾಗಿದೆ. ನೀರಾವರಿ ತಜ್ಞರು ಬೇಗನೇ ಗೇಟನ್ನು ಸರಿಪಡಿಸಿ ರೈತರ ಆತಂಕ ನಿವಾರಿಸಬೇಕು.
–ಪುರುಷೋತ್ತಮ ಗೌಡ, ರೈತ ಮುಖಂಡ
ಸರಪಳಿ ತುಂಡಾಗಲು ಸರ್ಕಾರ, ಅಧಿಕಾರಿಗಳ ನಿರ್ಲಕ್ಷ ಕಾರಣ. ಜಲಾಶಯಕ್ಕೆ ನೀರು ಬರುವ ಮುನ್ನ ಅದರ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿ, ಘಟಕವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಸಮಸ್ಯೆ ಕಂಡು ಬಂದಲ್ಲಿ ಸರಿಪಡಿಸಲು ಪ್ರಯತ್ನಗಳು ಆಗಿಬೇಕಿತ್ತು.