ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ತುಂಗಭದ್ರಾ ನದಿ ಪಾತ್ರ: 8,000 ಹೆಕ್ಟೇರ್ ಹಿಂಗಾರು ಭತ್ತ ನಾಟಿಗೆ ಸಿದ್ಧತೆ ಜೋರು

Published : 10 ಡಿಸೆಂಬರ್ 2025, 5:27 IST
Last Updated : 10 ಡಿಸೆಂಬರ್ 2025, 5:27 IST
ಫಾಲೋ ಮಾಡಿ
Comments
ಮಣ್ಣು ರಕ್ಷಣೆಗೆ ಹಸಿರೆಲೆ ಗೊಬ್ಬರ ಬೆಳೆಯಲು ಸಲಹೆ
‘ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆಗೆ ನೀರು ಪೂರೈಕೆ ಇಲ್ಲದ ಕಾರಣ ಗದ್ದೆಯಲ್ಲಿ ಹಸಿರೆಲೆ ಗೊಬ್ಬರಗಳಾದ ಸೆಣಬು ಡಯಾಂಚ ಪಿಳ್ಳೆಪೆಸರು ಬೆಳೆದಲ್ಲಿ ಮಣ್ಣಿನ ಫಲವತ್ತತೆಗೆ ಅನುಕೂಲವಾಗಲಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಸೋಮಶೇಖರ್ ತಿಳಿಸಿದರು. ‘ಮಣ್ಣಿನ ಆರೋಗ್ಯ ಕಾಪಾಡಲು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ರೈತರು ಮುತುವರ್ಜಿ ವಹಿಸಬೇಕು. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಕೋಶಗಳು ಹಾಳಾಗದಂತೆ ನೋಡಿಕೊಳ್ಳಬೇಕು. ತಾವು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನದಾಗಿ ಬಳಕೆ ಮಾಡುವ ರಾಸಾಯನಿಕ ಬಳಕೆ ಬದಲಾಗಿ ಸಾವಯವಗೊಬ್ಬರ ಉಪಯೋಗಿಸಬೇಕು. ಮಣ್ಣು ಸವಕಳಿಯಾಗದಂತೆ ಸಂರಕ್ಷಿಸುವ ಜವಾಬ್ದಾರಿ ಎಲ್ಲ ರೈತರ ಮೇಲಿದೆ’ ಎಂದರು.
‘6685 ಹೆಕ್ಟೇರ್‌ನಲ್ಲಿ 2ನೇ ಬೆಳೆ ಇಲ್ಲ’
ಕಂಪ್ಲಿ ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 6685 ಹೆಕ್ಟೇರ್‌ನಲ್ಲಿ ಎರಡನೇ ಬೆಳೆಯಾಗಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಜಲಾಶಯದ ಕ್ರೆಸ್ಟ್ ಗೇಟ್ ಕಾಮಗಾರಿ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ವಿರಾಮ ದೊರೆತಿದೆ. ಆದರೂ ಕೆಲವೇ ರೈತರು ಮಾತ್ರ ಗದ್ದೆಯಲ್ಲಿ ತೇವಾಂಶವಿರುವುದರಿಂದ ಕಡಲೆ ಬಿತ್ತನೆ ಮಾಡಿದ್ದಾರೆ. ಚಳಿ ಮತ್ತು ಇಬ್ಬನಿ ಬೀಳುವುದರಿಂದ ಈ ಬೆಳೆಗೆ ಹೆಚ್ಚಿನ ನೀರು ಅಗತ್ಯವಿಲ್ಲ ಎಂದು ರೈತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT