<p><strong>ಬಳ್ಳಾರಿ:</strong> ಸ್ಥಳೀಯ ಗಾಂಧಿ ನಗರದಲ್ಲಿ ಇರುವ ಹಳೆಯ ಜಿಲ್ಲಾ ಆಸ್ಪತ್ರೆಯ ಪಕ್ಕದ ಐವತ್ತು ವರ್ಷಗಳಷ್ಟು ಹಳೆಯ ದಾದ ಈ ಉದ್ಯಾನವು ಹಾಳಾಗಿದ್ದು, ಬಡಾವಣೆಯ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.<br /> <br /> 1978 ರಲ್ಲಿ ಭಿವೃದ್ಧಿಪಡಿಸಲಾಗಿದ್ದ ಈ ಉದ್ಯಾನಕ್ಕೆ ಸ್ವಾತಂತ್ರ್ಯ ಹೋರಾಟ ಗಾರ ಗೋಪಾಲಸ್ವಾಮಿ ಮೊದಲಿ ಯಾರ ಅವರ ಹೆಸರಿಡಲಾಗಿತ್ತು. ಈ ಹಿಂದೆ ಹಾಳಾಗಿದ್ದ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿತ್ತಾದರೂ, ಗಾಂಧಿನಗರದ ಸುತ್ತಮುತ್ತಲೂ ಇರುವ ಸಾರ್ವಜನಿಕರ ವಾಯು ವಿಹಾರಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಉದ್ಯಾನದಲ್ಲಿ ಹಚ್ಚ ಹಸಿರ ಗಿಡಮರ, ಹುಲ್ಲು ಹಾಸು, ಮತ್ತಿತರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.</p>.<p>ಆದರೆ ಈ ಕುರಿತು ಕಾಳಜಿ ವಹಿಸದೆ ಇದ್ದುದರಿಂದ ಇದೀಗ ಉದ್ಯಾನವು ಕಲ್ಲು, ಮಣ್ಣು, ಪ್ಲಾಸ್ಟಿಕ್, ಕಸ, ಕಡ್ಡಿ ಇತ್ಯಾದಿ ತ್ಯಾಜ್ಯ ವಸ್ತುಗಳಿಂದ ಸಂಪೂರ್ಣ ತಿಪ್ಪೆಯಂತೆ ಗೋಚರಿಸು ತ್ತಿದೆ. ಆದರೆ, ಸುಮಾರು 20 ವರ್ಷ ಗಳಿಂದ ಈಚೆಗೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಈ ಉದ್ಯಾನವು ಇದ್ದೂ ಇಲ್ಲದಂತಾಗಿದೆ.<br /> <br /> ಈ ಭಾಗದ ನಾಗರಿಕರ ಅನುಕೂಲ ಕ್ಕಾಗಿ ಉದ್ಯಾನದ ಮಧ್ಯಭಾಗದಲ್ಲಿ ಅನೇಕ ವರ್ಷಗಳಿಂದ ನೀರಿನ ಟ್ಯಾಂಕ್ನ್ನು ನಿರ್ಮಿಸಲಾಗಿತ್ತು. ಇದೀಗ ಈ ನೀರಿನ ಟ್ಯಾಂಕ್ ಶಿಥಿಲ ಗೊಂಡಿದ್ದು, ಅದರ ಪಕ್ಕದಲ್ಲೇ ಮತ್ತೊಂದು ನೂತನ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ.<br /> <br /> ಶಿಥಿಲಗೊಂಡಿರುವ ಹಳೆಯ ನೀರಿನ ಟ್ಯಾಂಕ್ನ್ನು ನೆಲಸಮಗೊಳಿಸದೇ ಈ ಜಾಗವನ್ನು ಆಕ್ರಮಿಸಿದಂತಾಗಿದೆ.ಹಳೆಯ ಟ್ಯಾಂಕ್ನ್ನು ಶೀಘ್ರದಲ್ಲೇ ತೆರವುಗೊಳಿಸಿ, ಉಳಿದ ಭಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಗಾಂಧಿನಗರದ ನಿವಾಸಿ ಮೇಘ ರಾಜ್ `ಪ್ರಜಾವಾಣಿಗೆ' ತಿಳಿಸಿದರು.<br /> <br /> ಐವತ್ತು ವರ್ಷ ಹಳೆಯದಾದ ಹಾಗೂ ಗಾಂಧಿನಗರದ ಹಲವಾರು ಬಡಾವಣೆಗಳ ಸಾರ್ವಜನಿಕರ ವಾಯುವಿಹಾರಕ್ಕೆ ಕೇವಲ ಇದೊಂದೇ ಉದ್ಯಾನ ಇದೆ. ಇದೀಗ ನಗರದ ಹೊಸ ಕಾಲೊನಿ ಹಾಗೂ ಬಡಾವಣೆಗಳಲ್ಲಿ ಪಾಲಿಕೆಯ ನೆರವಿನೊಂದಿಗೆ ಹೊಸ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಉದ್ಯಾನಗಳಿಗೆ ಮೊದಲೇ ಪ್ರತ್ಯೇಕ ನಿವೇಶನ ಕಾಯ್ದಿರಿಸಲಾಗುತ್ತದೆ.</p>.<p>ಆದರೆ, ಈಗಾಗಲೇ ಈ ಸ್ಥಳದಲ್ಲಿ ಅಗತ್ಯವಿರುವ ನೀವೇಶನವೂ ಇದ್ದು, ಅನುಕೂಲಕರ ವ್ಯವಸ್ಥೆಯೂ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸದಿರುವುದು ಬಡಾವಣೆಯ ಜನತೆಯಲ್ಲಿ ಬೇಸರ ಮೂಡಿಸಿದೆ.</p>.<p>ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆಯ ವೇಳೆಗೆ ಉದ್ಯಾನದಲ್ಲಿ ವಾಯುವಿಹಾರಕ್ಕಾಗಿ ಹಾಗೂ ವಿಶ್ರಾಂತಿ ಪಡೆಯಲು ಆಗಮಿಸುತ್ತಿದ್ದ ಬಡಾವಣೆಯ ವೃದ್ಧರು, ಯುವಕರು, ಮಕ್ಕಳು ಹಾಗೂ ಮಹಿಳೆಯರಿಗೆ ಗತಿಸಿ ಹೋಗಿರುವ ಈ ಉದ್ಯಾನದ ನೆನಪು ಮಾತ್ರ ಮಾಸದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಿ ಸಾರ್ವಜನಿಕರ ಅನು ಕೂಲಕ್ಕಾಗಿ ಉದ್ಯಾನದ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಕೋರಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಸ್ಥಳೀಯ ಗಾಂಧಿ ನಗರದಲ್ಲಿ ಇರುವ ಹಳೆಯ ಜಿಲ್ಲಾ ಆಸ್ಪತ್ರೆಯ ಪಕ್ಕದ ಐವತ್ತು ವರ್ಷಗಳಷ್ಟು ಹಳೆಯ ದಾದ ಈ ಉದ್ಯಾನವು ಹಾಳಾಗಿದ್ದು, ಬಡಾವಣೆಯ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.<br /> <br /> 1978 ರಲ್ಲಿ ಭಿವೃದ್ಧಿಪಡಿಸಲಾಗಿದ್ದ ಈ ಉದ್ಯಾನಕ್ಕೆ ಸ್ವಾತಂತ್ರ್ಯ ಹೋರಾಟ ಗಾರ ಗೋಪಾಲಸ್ವಾಮಿ ಮೊದಲಿ ಯಾರ ಅವರ ಹೆಸರಿಡಲಾಗಿತ್ತು. ಈ ಹಿಂದೆ ಹಾಳಾಗಿದ್ದ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿತ್ತಾದರೂ, ಗಾಂಧಿನಗರದ ಸುತ್ತಮುತ್ತಲೂ ಇರುವ ಸಾರ್ವಜನಿಕರ ವಾಯು ವಿಹಾರಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಉದ್ಯಾನದಲ್ಲಿ ಹಚ್ಚ ಹಸಿರ ಗಿಡಮರ, ಹುಲ್ಲು ಹಾಸು, ಮತ್ತಿತರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.</p>.<p>ಆದರೆ ಈ ಕುರಿತು ಕಾಳಜಿ ವಹಿಸದೆ ಇದ್ದುದರಿಂದ ಇದೀಗ ಉದ್ಯಾನವು ಕಲ್ಲು, ಮಣ್ಣು, ಪ್ಲಾಸ್ಟಿಕ್, ಕಸ, ಕಡ್ಡಿ ಇತ್ಯಾದಿ ತ್ಯಾಜ್ಯ ವಸ್ತುಗಳಿಂದ ಸಂಪೂರ್ಣ ತಿಪ್ಪೆಯಂತೆ ಗೋಚರಿಸು ತ್ತಿದೆ. ಆದರೆ, ಸುಮಾರು 20 ವರ್ಷ ಗಳಿಂದ ಈಚೆಗೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಈ ಉದ್ಯಾನವು ಇದ್ದೂ ಇಲ್ಲದಂತಾಗಿದೆ.<br /> <br /> ಈ ಭಾಗದ ನಾಗರಿಕರ ಅನುಕೂಲ ಕ್ಕಾಗಿ ಉದ್ಯಾನದ ಮಧ್ಯಭಾಗದಲ್ಲಿ ಅನೇಕ ವರ್ಷಗಳಿಂದ ನೀರಿನ ಟ್ಯಾಂಕ್ನ್ನು ನಿರ್ಮಿಸಲಾಗಿತ್ತು. ಇದೀಗ ಈ ನೀರಿನ ಟ್ಯಾಂಕ್ ಶಿಥಿಲ ಗೊಂಡಿದ್ದು, ಅದರ ಪಕ್ಕದಲ್ಲೇ ಮತ್ತೊಂದು ನೂತನ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ.<br /> <br /> ಶಿಥಿಲಗೊಂಡಿರುವ ಹಳೆಯ ನೀರಿನ ಟ್ಯಾಂಕ್ನ್ನು ನೆಲಸಮಗೊಳಿಸದೇ ಈ ಜಾಗವನ್ನು ಆಕ್ರಮಿಸಿದಂತಾಗಿದೆ.ಹಳೆಯ ಟ್ಯಾಂಕ್ನ್ನು ಶೀಘ್ರದಲ್ಲೇ ತೆರವುಗೊಳಿಸಿ, ಉಳಿದ ಭಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಗಾಂಧಿನಗರದ ನಿವಾಸಿ ಮೇಘ ರಾಜ್ `ಪ್ರಜಾವಾಣಿಗೆ' ತಿಳಿಸಿದರು.<br /> <br /> ಐವತ್ತು ವರ್ಷ ಹಳೆಯದಾದ ಹಾಗೂ ಗಾಂಧಿನಗರದ ಹಲವಾರು ಬಡಾವಣೆಗಳ ಸಾರ್ವಜನಿಕರ ವಾಯುವಿಹಾರಕ್ಕೆ ಕೇವಲ ಇದೊಂದೇ ಉದ್ಯಾನ ಇದೆ. ಇದೀಗ ನಗರದ ಹೊಸ ಕಾಲೊನಿ ಹಾಗೂ ಬಡಾವಣೆಗಳಲ್ಲಿ ಪಾಲಿಕೆಯ ನೆರವಿನೊಂದಿಗೆ ಹೊಸ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಉದ್ಯಾನಗಳಿಗೆ ಮೊದಲೇ ಪ್ರತ್ಯೇಕ ನಿವೇಶನ ಕಾಯ್ದಿರಿಸಲಾಗುತ್ತದೆ.</p>.<p>ಆದರೆ, ಈಗಾಗಲೇ ಈ ಸ್ಥಳದಲ್ಲಿ ಅಗತ್ಯವಿರುವ ನೀವೇಶನವೂ ಇದ್ದು, ಅನುಕೂಲಕರ ವ್ಯವಸ್ಥೆಯೂ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸದಿರುವುದು ಬಡಾವಣೆಯ ಜನತೆಯಲ್ಲಿ ಬೇಸರ ಮೂಡಿಸಿದೆ.</p>.<p>ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆಯ ವೇಳೆಗೆ ಉದ್ಯಾನದಲ್ಲಿ ವಾಯುವಿಹಾರಕ್ಕಾಗಿ ಹಾಗೂ ವಿಶ್ರಾಂತಿ ಪಡೆಯಲು ಆಗಮಿಸುತ್ತಿದ್ದ ಬಡಾವಣೆಯ ವೃದ್ಧರು, ಯುವಕರು, ಮಕ್ಕಳು ಹಾಗೂ ಮಹಿಳೆಯರಿಗೆ ಗತಿಸಿ ಹೋಗಿರುವ ಈ ಉದ್ಯಾನದ ನೆನಪು ಮಾತ್ರ ಮಾಸದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಿ ಸಾರ್ವಜನಿಕರ ಅನು ಕೂಲಕ್ಕಾಗಿ ಉದ್ಯಾನದ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಕೋರಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>