<p>ಸಿರುಗುಪ್ಪ: ಭಾರತಕ್ಕೆ ಮಹಾಭಾರತ ಮತ್ತು ರಾಮಾಯಣ ಎರಡು ಕಣ್ಣುಗಳೆಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.<br /> <br /> ಪಟ್ಟಣದಲ್ಲಿ ಒಂದು ತಿಂಗಳ ಪರ್ಯಂತರ ನಡೆದ ವ್ಯಾಸವಿಜ್ಞಾನ ವೈಜಯಂತೀ ಜ್ಞಾನಸತ್ರ ಕಾರ್ಯಕ್ರಮದ ಮಹಾಭಾರತ ಹಾಗೂ ಶ್ರೀಭಗವತ ಪ್ರವಚನದ ಮಂಗಳ ಮಹೋತ್ಸವದಲ್ಲಿ ಅವರು ಮಂಗಳ ಶುಭ ಸಂದೇಶ ನೀಡಿದರು.<br /> <br /> ಮಹಾಭಾರತವನ್ನು ಕೇವಲ ಕಥೆಯನ್ನಾಗಿ ಓದದೇ ಅದರಿಂದ ಕಲಿಯಬೇಕಾದ ತತ್ವಗಳನ್ನು ಅರಿಯಬೇಕೆಂದರು.<br /> ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರದಂತೆ ನಮ್ಮ ಶರೀರದಲ್ಲಿಯೂ ಪ್ರತಿನಿತ್ಯ ನಡೆವ ಕುರುಕ್ಷೇತ್ರ ಅಂದರೆ ಸದ್ಗುಣ ಮತ್ತು ದುರ್ಗುಣಗಳ ಯುದ್ಧದಲ್ಲಿ ಸದ್ಗುಣವು ನಡೆಯು ವಂತಾಗಬೇಕು, ಧರ್ಮರಾಜನಂತೆ ಬಾಳಬೇಕು ಎಂದು ಶ್ರೀಗಳು ಕರೆ ನೀಡಿದರು.<br /> <br /> ಭಗವಂತನ ಸಾಕ್ಷಾತ್ಕಾರಕ್ಕೂ ಕಲಿಯುಗದಲ್ಲಿ ಭಕ್ತಿ ಉಂಟಾಗ ಬೇಕಾದರೆ ಭಾಗವತರ ಶ್ರವಣ ಮಾಡಿ ಪರೀಕ್ಷಿತನಂತೆ ಕೃತಾರ್ಥರಾಗಬೇಕೆಂದು ಉಪದೇಶಿಸಿದರು.<br /> <br /> ಶ್ರೀಪಾದಂಗಳವರನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಪುರಜನರು ಅದ್ದೂರಿ ಯಾಗಿ ಶೋಭಾಯಾತ್ರೆ ನಡೆಸಿ ಬೀಳ್ಕೊಟ್ಟರು.<br /> <br /> ವ್ಯಾಸವಿಜ್ಞಾನ ವೈಜಯಂತೀ ಜ್ಞಾನಸತ್ರ ಸಮಿತಿಯ ಅಧ್ಯಕ್ಷ ಕೆ.ಎನ್.ಕೃಷ್ಣಮೂರ್ತಿ, ಬಿ.ಗುರುರಾಜಾಚಾರ್, ಎ.ಜೆ. ಸಂಜಯಕುಮಾರ್, ಕೆ. ಶ್ರೀನಿವಾಸಮೂರ್ತಿ, ಎಚ್.ಜೆ. ಮುರಳೀಧರಾಚಾರ್, ಗೋಪಿನಾಥ ಶಾಸ್ತ್ರಿ, ಜೆ.ಶಾಮಾಚಾರ್, ಎಚ್.ಕೆ. ಗುರುರಾಜಾರಾವ್ ಮತ್ತು ವಿಪ್ರ ಬಾಂಧವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರುಗುಪ್ಪ: ಭಾರತಕ್ಕೆ ಮಹಾಭಾರತ ಮತ್ತು ರಾಮಾಯಣ ಎರಡು ಕಣ್ಣುಗಳೆಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.<br /> <br /> ಪಟ್ಟಣದಲ್ಲಿ ಒಂದು ತಿಂಗಳ ಪರ್ಯಂತರ ನಡೆದ ವ್ಯಾಸವಿಜ್ಞಾನ ವೈಜಯಂತೀ ಜ್ಞಾನಸತ್ರ ಕಾರ್ಯಕ್ರಮದ ಮಹಾಭಾರತ ಹಾಗೂ ಶ್ರೀಭಗವತ ಪ್ರವಚನದ ಮಂಗಳ ಮಹೋತ್ಸವದಲ್ಲಿ ಅವರು ಮಂಗಳ ಶುಭ ಸಂದೇಶ ನೀಡಿದರು.<br /> <br /> ಮಹಾಭಾರತವನ್ನು ಕೇವಲ ಕಥೆಯನ್ನಾಗಿ ಓದದೇ ಅದರಿಂದ ಕಲಿಯಬೇಕಾದ ತತ್ವಗಳನ್ನು ಅರಿಯಬೇಕೆಂದರು.<br /> ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರದಂತೆ ನಮ್ಮ ಶರೀರದಲ್ಲಿಯೂ ಪ್ರತಿನಿತ್ಯ ನಡೆವ ಕುರುಕ್ಷೇತ್ರ ಅಂದರೆ ಸದ್ಗುಣ ಮತ್ತು ದುರ್ಗುಣಗಳ ಯುದ್ಧದಲ್ಲಿ ಸದ್ಗುಣವು ನಡೆಯು ವಂತಾಗಬೇಕು, ಧರ್ಮರಾಜನಂತೆ ಬಾಳಬೇಕು ಎಂದು ಶ್ರೀಗಳು ಕರೆ ನೀಡಿದರು.<br /> <br /> ಭಗವಂತನ ಸಾಕ್ಷಾತ್ಕಾರಕ್ಕೂ ಕಲಿಯುಗದಲ್ಲಿ ಭಕ್ತಿ ಉಂಟಾಗ ಬೇಕಾದರೆ ಭಾಗವತರ ಶ್ರವಣ ಮಾಡಿ ಪರೀಕ್ಷಿತನಂತೆ ಕೃತಾರ್ಥರಾಗಬೇಕೆಂದು ಉಪದೇಶಿಸಿದರು.<br /> <br /> ಶ್ರೀಪಾದಂಗಳವರನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಪುರಜನರು ಅದ್ದೂರಿ ಯಾಗಿ ಶೋಭಾಯಾತ್ರೆ ನಡೆಸಿ ಬೀಳ್ಕೊಟ್ಟರು.<br /> <br /> ವ್ಯಾಸವಿಜ್ಞಾನ ವೈಜಯಂತೀ ಜ್ಞಾನಸತ್ರ ಸಮಿತಿಯ ಅಧ್ಯಕ್ಷ ಕೆ.ಎನ್.ಕೃಷ್ಣಮೂರ್ತಿ, ಬಿ.ಗುರುರಾಜಾಚಾರ್, ಎ.ಜೆ. ಸಂಜಯಕುಮಾರ್, ಕೆ. ಶ್ರೀನಿವಾಸಮೂರ್ತಿ, ಎಚ್.ಜೆ. ಮುರಳೀಧರಾಚಾರ್, ಗೋಪಿನಾಥ ಶಾಸ್ತ್ರಿ, ಜೆ.ಶಾಮಾಚಾರ್, ಎಚ್.ಕೆ. ಗುರುರಾಜಾರಾವ್ ಮತ್ತು ವಿಪ್ರ ಬಾಂಧವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>