ಕೋವಿಡ್ ಕಾರಣದಿಂದ ಜಿಲ್ಲಾಡಳಿತ ಬನಶಂಕರಿ ಜಾತ್ರೆ ರದ್ದು ಮಾಡಿತ್ತು. ದೇವಾಲಯಕ್ಕೆ ಜನವರಿ 31ರವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಿತ್ತು. ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳ ಕೈಗೊಳ್ಳಲು ಮಾತ್ರ ಅವಕಾಶ ನೀಡಿ, ಹುಣ್ಣಿಮೆ ದಿನಸಂಜೆ ಸರಳವಾಗಿ ರಥೋತ್ಸವ ಆಚರಣೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ದೇವಾಲಯದ ಪರಿಸರಕ್ಕೆ ಹೊರಗಿನಿಂದ ಯಾರೂ ಬಾರದಂತೆ ತಡೆಯಲು ಬನಶಂಕರಿಯ ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು.