<p><strong>ಆನೇಕಲ್</strong>: ಹೊಟ್ಟೆ ಭಾಗ ಮತ್ತು ಶ್ವಾಸಕೋಶವನ್ನು ಬೇರ್ಪಡಿಸುವ ವಪೆ (ತಿಳುವಾದ ಹಾಳೆಯಂತ ಪದರು) ಹರಿದು ಉಸಿರಾಡಲು ಕಷ್ಟಪಡುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿರತೆಗೆ ಮಾರ್ಚ್ನಲ್ಲಿ ಪಶುವೈದ್ಯರ ತಂಡ ನಡೆಸಿದ್ದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಈಗ ಚಿರತೆ ಚೇತರಿಸಿಕೊಳ್ಳುತ್ತಿದೆ.</p>.<p>ಅಪರೂಪದ ಶಸ್ತ್ರಚಿಕಿತ್ಸೆಯ ಬಳಿಕ ಚಿರತೆಯನ್ನು ಆರೇಳು ತಿಂಗಳ ಕಾಲ ಜೋಪಾನ ಮಾಡಲಾಗಿದೆ. ಚಿರತೆ ಆರೋಗ್ಯವಾಗಿದ್ದು ಇದೀಗ ಲವಲವಿಕೆಯಿಂದ ಓಡಾಡುತ್ತಿದೆ. ಇದು ಉದ್ಯಾನದ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಸಂತಸ ತಂದಿದೆ.</p>.<p>ಡಯಾಫ್ರಾಗ್ನಾಮ್ಯಾಟಿಕ್ ಹರ್ನಿಯಾ (ಹೈಟಲ್ ಹರ್ನಿಯಾ ಟೈಪ್ 1) ಸಮಸ್ಯೆಯಿಂದ ನರಳುತ್ತಿದ್ದ ಚಿರತೆಯ ಹೊಟ್ಟೆಯು ಶ್ವಾಸಕೋಶದ ಮೇಲೆ ಬರುತ್ತಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತಿತ್ತು. ಓಡಾಡಲೂ ಪರದಾಡುತ್ತಿದ್ದ ಚಿರತೆ ತಿಂದ ಆಹಾರವನ್ನೂ ವಾಂತಿ ಮಾಡಿಕೊಳ್ಳುತ್ತಿತ್ತು. </p>.<p>ಇದರಿಂದ ಚಿರತೆಯ ತೂಕ 13 ಕೆ.ಜಿ.ಗೆ ಇಳಿದಿತ್ತು. ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಚಿರತೆಯ ಕುರಿತು ಬನ್ನೇರುಘಟ್ಟದ ವೈದ್ಯರ ತಂಡವು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.</p>.<p>ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ದೊರೆತ ಬಳಿಕ ಉದ್ಯಾನದ ಪಶು ವೈದ್ಯರ ತಂಡ ಮಾರ್ಚ್ 27ರಂದು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿತ್ತು. ಈ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿಯೇ ಮೊದಲು ಎಂದು ಚಿಕಿತ್ಸಕರ ತಂಡ ಹೇಳಿದೆ. </p>.<p>ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶು ವೈದ್ಯರಾದ ಡಾ.ಕಿರಣ್ ಕುಮಾರ್, ಡಾ.ಆನಂದ್, ಡಾ.ಮಂಜುನಾಥ್ ಅವರ ತಂಡವು ನುರಿತ ಪ್ರಾಣಿಪಾಲಕರ ಜೊತೆಗೂಡಿ ಶಸ್ತ್ರಚಿಕಿತ್ಸೆ ನಡೆಸಿತ್ತು.</p>.<p>‘ಚಿರತೆ ಪ್ರಸ್ತುತ ಸುಮಾರು 40 ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ. ಇಂತಹ ಶಸ್ತ್ರಚಿಕಿತ್ಸೆಯಿಂದ ಚಿರತೆಗಳು ಬದುಕುಳಿದ ಪ್ರಕರಣಗಳಿಲ್ಲ. ವೈದ್ಯಕೀಯ ದಾಖಲೆಗಳ ಪ್ರಕಾರ ಏಷ್ಯಾದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಇದೇ ಮೊದಲು’ ಎಂದು ಡಾ.ಕಿರಣ್ ಕುಮಾರ್ ತಿಳಿಸಿದರು.</p>.<p><strong>ಗದ್ದೆಯಲ್ಲಿ ಸಿಕ್ಕಿದ್ದ ಮೂರು ಕಾಲುಗಳ ಮರಿ!</strong></p><p>ಮಂಡ್ಯ ಜಿಲ್ಲೆಯ ಗದ್ದೆಯೊಂದರಲ್ಲಿ ಸಿಕ್ಕಿದ್ದ ನಾಲ್ಕು ತಿಂಗಳ ಚಿರತೆ ಮರಿಯನ್ನು ಮೈಸೂರು ಮೃಗಾಲಯದವರು ಸಂರಕ್ಷಿಸಿದ್ದರು. 2023ರ ಡಿ. 6ರಂದು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ನೀಡಿದ್ದರು. ಚಿರತೆಗೆ ಮುಂಭಾಗದ ಬಲಗಾಲು ಇರಲಿಲ್ಲ. ಮೂರು ಕಾಲುಗಳಿಂದಾಗಿ ಚಿರತೆ ಓಡಾಡಲೂ ಪರದಾಡುತ್ತಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್</strong>: ಹೊಟ್ಟೆ ಭಾಗ ಮತ್ತು ಶ್ವಾಸಕೋಶವನ್ನು ಬೇರ್ಪಡಿಸುವ ವಪೆ (ತಿಳುವಾದ ಹಾಳೆಯಂತ ಪದರು) ಹರಿದು ಉಸಿರಾಡಲು ಕಷ್ಟಪಡುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿರತೆಗೆ ಮಾರ್ಚ್ನಲ್ಲಿ ಪಶುವೈದ್ಯರ ತಂಡ ನಡೆಸಿದ್ದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಈಗ ಚಿರತೆ ಚೇತರಿಸಿಕೊಳ್ಳುತ್ತಿದೆ.</p>.<p>ಅಪರೂಪದ ಶಸ್ತ್ರಚಿಕಿತ್ಸೆಯ ಬಳಿಕ ಚಿರತೆಯನ್ನು ಆರೇಳು ತಿಂಗಳ ಕಾಲ ಜೋಪಾನ ಮಾಡಲಾಗಿದೆ. ಚಿರತೆ ಆರೋಗ್ಯವಾಗಿದ್ದು ಇದೀಗ ಲವಲವಿಕೆಯಿಂದ ಓಡಾಡುತ್ತಿದೆ. ಇದು ಉದ್ಯಾನದ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಸಂತಸ ತಂದಿದೆ.</p>.<p>ಡಯಾಫ್ರಾಗ್ನಾಮ್ಯಾಟಿಕ್ ಹರ್ನಿಯಾ (ಹೈಟಲ್ ಹರ್ನಿಯಾ ಟೈಪ್ 1) ಸಮಸ್ಯೆಯಿಂದ ನರಳುತ್ತಿದ್ದ ಚಿರತೆಯ ಹೊಟ್ಟೆಯು ಶ್ವಾಸಕೋಶದ ಮೇಲೆ ಬರುತ್ತಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತಿತ್ತು. ಓಡಾಡಲೂ ಪರದಾಡುತ್ತಿದ್ದ ಚಿರತೆ ತಿಂದ ಆಹಾರವನ್ನೂ ವಾಂತಿ ಮಾಡಿಕೊಳ್ಳುತ್ತಿತ್ತು. </p>.<p>ಇದರಿಂದ ಚಿರತೆಯ ತೂಕ 13 ಕೆ.ಜಿ.ಗೆ ಇಳಿದಿತ್ತು. ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಚಿರತೆಯ ಕುರಿತು ಬನ್ನೇರುಘಟ್ಟದ ವೈದ್ಯರ ತಂಡವು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.</p>.<p>ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ದೊರೆತ ಬಳಿಕ ಉದ್ಯಾನದ ಪಶು ವೈದ್ಯರ ತಂಡ ಮಾರ್ಚ್ 27ರಂದು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿತ್ತು. ಈ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿಯೇ ಮೊದಲು ಎಂದು ಚಿಕಿತ್ಸಕರ ತಂಡ ಹೇಳಿದೆ. </p>.<p>ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶು ವೈದ್ಯರಾದ ಡಾ.ಕಿರಣ್ ಕುಮಾರ್, ಡಾ.ಆನಂದ್, ಡಾ.ಮಂಜುನಾಥ್ ಅವರ ತಂಡವು ನುರಿತ ಪ್ರಾಣಿಪಾಲಕರ ಜೊತೆಗೂಡಿ ಶಸ್ತ್ರಚಿಕಿತ್ಸೆ ನಡೆಸಿತ್ತು.</p>.<p>‘ಚಿರತೆ ಪ್ರಸ್ತುತ ಸುಮಾರು 40 ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ. ಇಂತಹ ಶಸ್ತ್ರಚಿಕಿತ್ಸೆಯಿಂದ ಚಿರತೆಗಳು ಬದುಕುಳಿದ ಪ್ರಕರಣಗಳಿಲ್ಲ. ವೈದ್ಯಕೀಯ ದಾಖಲೆಗಳ ಪ್ರಕಾರ ಏಷ್ಯಾದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಇದೇ ಮೊದಲು’ ಎಂದು ಡಾ.ಕಿರಣ್ ಕುಮಾರ್ ತಿಳಿಸಿದರು.</p>.<p><strong>ಗದ್ದೆಯಲ್ಲಿ ಸಿಕ್ಕಿದ್ದ ಮೂರು ಕಾಲುಗಳ ಮರಿ!</strong></p><p>ಮಂಡ್ಯ ಜಿಲ್ಲೆಯ ಗದ್ದೆಯೊಂದರಲ್ಲಿ ಸಿಕ್ಕಿದ್ದ ನಾಲ್ಕು ತಿಂಗಳ ಚಿರತೆ ಮರಿಯನ್ನು ಮೈಸೂರು ಮೃಗಾಲಯದವರು ಸಂರಕ್ಷಿಸಿದ್ದರು. 2023ರ ಡಿ. 6ರಂದು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ನೀಡಿದ್ದರು. ಚಿರತೆಗೆ ಮುಂಭಾಗದ ಬಲಗಾಲು ಇರಲಿಲ್ಲ. ಮೂರು ಕಾಲುಗಳಿಂದಾಗಿ ಚಿರತೆ ಓಡಾಡಲೂ ಪರದಾಡುತ್ತಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>