<p><strong>ಆನೇಕಲ್: </strong>ಪಟ್ಟಣಕ್ಕೆ ಸಮೀಪದ ಡೆಂಕಣಿಕೋಟೆಯ ಮಲ್ಲಿಕಾರ್ಜುನ ದುರ್ಗಂನಲ್ಲಿ ಜಲ್ಲಿಕಟ್ಟು ನಡೆಯಿತು. ಸಹಸ್ರಾರು ಮಂದಿ ಜಲ್ಲಿಕಟ್ಟು ವೀಕ್ಷಿಸಿದರು. ಜಲ್ಲಿಕಟ್ಟಿನಲ್ಲಿ ರಾಸುಗಳನ್ನು ಹಿಡಿಯಲು ಯುವಕರ ಗುಂಪುಗಳು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಮಲ್ಲಿಕಾರ್ಜುನ ದುರ್ಗಂನಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷ ಜಲ್ಲಿಕಟ್ಟು ನಡೆಸಲಾಗುತ್ತದೆ. ಈ ಬಾರಿ ಕರ್ನಾಟಕದ ಗಡಿ ಗ್ರಾಮಗಳು ಸೇರಿದಂತೆ ಸಹಸ್ರಾರು ಮಂದಿ ಜಲ್ಲಿಕಟ್ಟು ಪ್ರಿಯರು ಆಗಮಿಸಿದ್ದರು. ಆನೇಕಲ್, ಅತ್ತಿಬೆಲೆ, ಗುಮ್ಮಳಾಪುರ, ಥಳೀ ಸೇರಿದಂತೆ ವಿವಿಧೆಡೆಯಿಂದ ಹೋರಿಗಳು ಆಗಮಿಸಿದ್ದವು. ರಾಸುಗಳನ್ನು ಹಿಡಿಯಲು ಯುವಕರು ಮುನ್ನುಗ್ಗುತ್ತಿದ್ದ ದೃಶ್ಯ ಗಮನ ಸೆಳೆಯಿತು.</p>.<p>ಕರ್ನಾಟಕದ ರಾಣೆಬೆನ್ನೂರು ರಾಸು ನೆರೆದಿದ್ದವರ ಗಮನ ಸೆಳೆಯಿತು. ಕರ್ನಾಟಕ ಬಾವುಟದ ಬಣ್ಣದ ಬಲೂನ್ಗಳನ್ನು ರಾಸಿಗೆ ಕಟ್ಟಿ ಅಲಂಕರಿಸಲಾಗಿತ್ತು. ಈ ರಾಸನ್ನು ಹಿಡಿಯಲು ನೆರೆದಿದ್ದವರು ಪ್ರಯತ್ನ ಪಟ್ಟರೂ ರಾಸಿನ ವೇಗಕ್ಕೆ ಯಾರು ಸಹ ಮುಟ್ಟಲಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಪಟ್ಟಣಕ್ಕೆ ಸಮೀಪದ ಡೆಂಕಣಿಕೋಟೆಯ ಮಲ್ಲಿಕಾರ್ಜುನ ದುರ್ಗಂನಲ್ಲಿ ಜಲ್ಲಿಕಟ್ಟು ನಡೆಯಿತು. ಸಹಸ್ರಾರು ಮಂದಿ ಜಲ್ಲಿಕಟ್ಟು ವೀಕ್ಷಿಸಿದರು. ಜಲ್ಲಿಕಟ್ಟಿನಲ್ಲಿ ರಾಸುಗಳನ್ನು ಹಿಡಿಯಲು ಯುವಕರ ಗುಂಪುಗಳು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಮಲ್ಲಿಕಾರ್ಜುನ ದುರ್ಗಂನಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷ ಜಲ್ಲಿಕಟ್ಟು ನಡೆಸಲಾಗುತ್ತದೆ. ಈ ಬಾರಿ ಕರ್ನಾಟಕದ ಗಡಿ ಗ್ರಾಮಗಳು ಸೇರಿದಂತೆ ಸಹಸ್ರಾರು ಮಂದಿ ಜಲ್ಲಿಕಟ್ಟು ಪ್ರಿಯರು ಆಗಮಿಸಿದ್ದರು. ಆನೇಕಲ್, ಅತ್ತಿಬೆಲೆ, ಗುಮ್ಮಳಾಪುರ, ಥಳೀ ಸೇರಿದಂತೆ ವಿವಿಧೆಡೆಯಿಂದ ಹೋರಿಗಳು ಆಗಮಿಸಿದ್ದವು. ರಾಸುಗಳನ್ನು ಹಿಡಿಯಲು ಯುವಕರು ಮುನ್ನುಗ್ಗುತ್ತಿದ್ದ ದೃಶ್ಯ ಗಮನ ಸೆಳೆಯಿತು.</p>.<p>ಕರ್ನಾಟಕದ ರಾಣೆಬೆನ್ನೂರು ರಾಸು ನೆರೆದಿದ್ದವರ ಗಮನ ಸೆಳೆಯಿತು. ಕರ್ನಾಟಕ ಬಾವುಟದ ಬಣ್ಣದ ಬಲೂನ್ಗಳನ್ನು ರಾಸಿಗೆ ಕಟ್ಟಿ ಅಲಂಕರಿಸಲಾಗಿತ್ತು. ಈ ರಾಸನ್ನು ಹಿಡಿಯಲು ನೆರೆದಿದ್ದವರು ಪ್ರಯತ್ನ ಪಟ್ಟರೂ ರಾಸಿನ ವೇಗಕ್ಕೆ ಯಾರು ಸಹ ಮುಟ್ಟಲಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>