<p><strong>ಆನೇಕಲ್: </strong>ಪಟ್ಟಣದ ಶ್ರೀರಾಮ ಕುಟೀರದಲ್ಲಿ ಸಂಪೂರ್ಣ ಮಹಿಳೆ ಕಲಾವಿದರೇ ‘ದಕ್ಷಯಜ್ಞ’ ನಾಟಕ ಪ್ರದರ್ಶಿಸಿದರು.</p>.<p>ಮಾರಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ನಾಟಕಕ್ಕೆ ಮಹಿಳಾ ಪಾತ್ರಧಾರಿಗಳು ಜೀವತುಂಬಿದರು. ಹೊಂಗಸಂದ್ರದ ಪರಮಶಿವಯಯ್ಯ ಅವರ ನಿರ್ದೇಶನದಲ್ಲಿ ನಾಟಕ ಮೂಡಿ ಬಂತು. </p>.<p>ನಾಟಕ ಪ್ರದರ್ಶನವು ರಾತ್ರಿ 2ಗಂಟೆಗಳವರೆಗೂ ನಡೆಯಿತು. ಮಧ್ಯರಾತ್ರಿಯಲ್ಲಿಯೂ ಪೌರಾಣಿಕ ನಾಟಕ ವೀಕ್ಷಿಸಲು ರಾಮಕುಟೀರದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. </p>.<p>ಈಶ್ವರನಾಗಿ ರೇಣುಕಾ, ದದೀಚಿಯಾಗಿ ನಳಿನಾಕ್ಷಿ, ವಿಷ್ಣು ಪಾತ್ರದಲ್ಲಿ ಅನುಸೂಯ, ನಂದಿಯಾಗಿ ರಾಜೇಶ್ವರಿ ಜೀವ ತುಂಬಿದರು. ಭಾರತಿ, ದೀಪು, ಪ್ರಿಯಾಂಕ, ರಂಜಿತ, ಇಂದು, ಶಂಕರಮ್ಮ, ಹರ್ಷಿತಾ, ಶ್ರೀವಿದ್ಯಾ, ನಿತ್ಯಾ ಸಾಥ್ ನೀಡಿದರು.</p>.<p>ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಇಂದಿನ ಅವಶ್ಯಕವಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ನಾಟಕಕ್ಕೆ ಇದೆ. ಪೌರಾಣಿಕ ನಾಟಕಗಳಿಂದ ಉತ್ತಮ ಸಂದೇಶಗಳು ದೊರೆಯುತ್ತವೆ. ಮಹಿಳಾ ಪಾತ್ರಧಾರಿಗಳು ನಾಟಕ ಪ್ರದರ್ಶನ ನೀಡಿರುವುದು ಶ್ಲಾಘನೀಯ ಎಂದು ನಾಟಕ ನಿರ್ದೇಶಶಕ ಪರಮಶಿವಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಪಟ್ಟಣದ ಶ್ರೀರಾಮ ಕುಟೀರದಲ್ಲಿ ಸಂಪೂರ್ಣ ಮಹಿಳೆ ಕಲಾವಿದರೇ ‘ದಕ್ಷಯಜ್ಞ’ ನಾಟಕ ಪ್ರದರ್ಶಿಸಿದರು.</p>.<p>ಮಾರಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ನಾಟಕಕ್ಕೆ ಮಹಿಳಾ ಪಾತ್ರಧಾರಿಗಳು ಜೀವತುಂಬಿದರು. ಹೊಂಗಸಂದ್ರದ ಪರಮಶಿವಯಯ್ಯ ಅವರ ನಿರ್ದೇಶನದಲ್ಲಿ ನಾಟಕ ಮೂಡಿ ಬಂತು. </p>.<p>ನಾಟಕ ಪ್ರದರ್ಶನವು ರಾತ್ರಿ 2ಗಂಟೆಗಳವರೆಗೂ ನಡೆಯಿತು. ಮಧ್ಯರಾತ್ರಿಯಲ್ಲಿಯೂ ಪೌರಾಣಿಕ ನಾಟಕ ವೀಕ್ಷಿಸಲು ರಾಮಕುಟೀರದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. </p>.<p>ಈಶ್ವರನಾಗಿ ರೇಣುಕಾ, ದದೀಚಿಯಾಗಿ ನಳಿನಾಕ್ಷಿ, ವಿಷ್ಣು ಪಾತ್ರದಲ್ಲಿ ಅನುಸೂಯ, ನಂದಿಯಾಗಿ ರಾಜೇಶ್ವರಿ ಜೀವ ತುಂಬಿದರು. ಭಾರತಿ, ದೀಪು, ಪ್ರಿಯಾಂಕ, ರಂಜಿತ, ಇಂದು, ಶಂಕರಮ್ಮ, ಹರ್ಷಿತಾ, ಶ್ರೀವಿದ್ಯಾ, ನಿತ್ಯಾ ಸಾಥ್ ನೀಡಿದರು.</p>.<p>ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಇಂದಿನ ಅವಶ್ಯಕವಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ನಾಟಕಕ್ಕೆ ಇದೆ. ಪೌರಾಣಿಕ ನಾಟಕಗಳಿಂದ ಉತ್ತಮ ಸಂದೇಶಗಳು ದೊರೆಯುತ್ತವೆ. ಮಹಿಳಾ ಪಾತ್ರಧಾರಿಗಳು ನಾಟಕ ಪ್ರದರ್ಶನ ನೀಡಿರುವುದು ಶ್ಲಾಘನೀಯ ಎಂದು ನಾಟಕ ನಿರ್ದೇಶಶಕ ಪರಮಶಿವಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>