ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ತರಕಾರಿ ತ್ಯಾಜ್ಯಕ್ಕೆ ಕೆರೆ ಅಂಗಳ

Last Updated 10 ಜೂನ್ 2020, 9:46 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಮೆಣಸಿ ಕೆರೆ ಅಂಗಳದಲ್ಲಿ ತರಕಾರಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಜಲಚರಗಳು ಸಾಯುವ ಅಪಾಯ ಎದುರಾಗಿದೆ ಎಂದು ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ ತಿಳಿಸಿದರು.

ಮೆಣಸಿ ಕೆರೆ ನಗರಕ್ಕೆ ಸಮೀಪ ಇರುವುದರಿಂದ ತರಕಾರಿ, ಕೋಳಿ ಹಾಗೂ ಹಳೆ ಬಟ್ಟೆಗಳ ತಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಇರುವ ಮೀನು, ಕಪ್ಪೆ ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಸಾಯುತ್ತಿವೆ. ಕೆರೆ ಅಂಗಳದ ನೀರಿನಲ್ಲಿರುವ ಮೀನು, ಇತರೆ ಪ್ರಾಣಿಗಳನ್ನು ತಿನ್ನಲು ಬರುವ ಕೊಕ್ಕರೆಗಳ ಕಾಲುಗಳಿಗೆ ಪ್ಲಾಸ್ಟಿಕ್‌ ದಾರಗಳು ಸುತ್ತಿಕೊಂಡು ಮರದಲ್ಲಿ ಕುಳಿತಾಗ ರಂಬೆಗಳಿಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಮೆಣಸಿ ಕೆರೆ ಅಂಗಳದಲ್ಲಿ ಜಾಲಿ ಮರಗಳು ಹೆಚ್ಚಾಗಿರುವುದರಿಂದ ಕೊಕ್ಕರೆಗಳ ಕಾಲಿನಲ್ಲಿರುವ ದಾರ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡು ಹಾರಲು ಆಗದೆ ಪ್ರಾಣ ಬಿಡುತ್ತಿವೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆ ಸ್ವಚ್ಛತೆ ಕಡೆಗೆ ಗಮನ ನೀಡಬೇಕು ಎಂದು
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT