ಮೆಣಸಿ ಕೆರೆ ನಗರಕ್ಕೆ ಸಮೀಪ ಇರುವುದರಿಂದ ತರಕಾರಿ, ಕೋಳಿ ಹಾಗೂ ಹಳೆ ಬಟ್ಟೆಗಳ ತಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಇರುವ ಮೀನು, ಕಪ್ಪೆ ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಸಾಯುತ್ತಿವೆ. ಕೆರೆ ಅಂಗಳದ ನೀರಿನಲ್ಲಿರುವ ಮೀನು, ಇತರೆ ಪ್ರಾಣಿಗಳನ್ನು ತಿನ್ನಲು ಬರುವ ಕೊಕ್ಕರೆಗಳ ಕಾಲುಗಳಿಗೆ ಪ್ಲಾಸ್ಟಿಕ್ ದಾರಗಳು ಸುತ್ತಿಕೊಂಡು ಮರದಲ್ಲಿ ಕುಳಿತಾಗ ರಂಬೆಗಳಿಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಮೆಣಸಿ ಕೆರೆ ಅಂಗಳದಲ್ಲಿ ಜಾಲಿ ಮರಗಳು ಹೆಚ್ಚಾಗಿರುವುದರಿಂದ ಕೊಕ್ಕರೆಗಳ ಕಾಲಿನಲ್ಲಿರುವ ದಾರ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡು ಹಾರಲು ಆಗದೆ ಪ್ರಾಣ ಬಿಡುತ್ತಿವೆ ಎಂದರು.