<p><strong>ದೊಡ್ಡಬಳ್ಳಾಪುರ: </strong>ತಾಲ್ಲೂಕಿನ ಮೆಣಸಿ ಕೆರೆ ಅಂಗಳದಲ್ಲಿ ತರಕಾರಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಜಲಚರಗಳು ಸಾಯುವ ಅಪಾಯ ಎದುರಾಗಿದೆ ಎಂದು ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ ತಿಳಿಸಿದರು.</p>.<p>ಮೆಣಸಿ ಕೆರೆ ನಗರಕ್ಕೆ ಸಮೀಪ ಇರುವುದರಿಂದ ತರಕಾರಿ, ಕೋಳಿ ಹಾಗೂ ಹಳೆ ಬಟ್ಟೆಗಳ ತಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಇರುವ ಮೀನು, ಕಪ್ಪೆ ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಸಾಯುತ್ತಿವೆ. ಕೆರೆ ಅಂಗಳದ ನೀರಿನಲ್ಲಿರುವ ಮೀನು, ಇತರೆ ಪ್ರಾಣಿಗಳನ್ನು ತಿನ್ನಲು ಬರುವ ಕೊಕ್ಕರೆಗಳ ಕಾಲುಗಳಿಗೆ ಪ್ಲಾಸ್ಟಿಕ್ ದಾರಗಳು ಸುತ್ತಿಕೊಂಡು ಮರದಲ್ಲಿ ಕುಳಿತಾಗ ರಂಬೆಗಳಿಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಮೆಣಸಿ ಕೆರೆ ಅಂಗಳದಲ್ಲಿ ಜಾಲಿ ಮರಗಳು ಹೆಚ್ಚಾಗಿರುವುದರಿಂದ ಕೊಕ್ಕರೆಗಳ ಕಾಲಿನಲ್ಲಿರುವ ದಾರ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡು ಹಾರಲು ಆಗದೆ ಪ್ರಾಣ ಬಿಡುತ್ತಿವೆ ಎಂದರು.</p>.<p>ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆ ಸ್ವಚ್ಛತೆ ಕಡೆಗೆ ಗಮನ ನೀಡಬೇಕು ಎಂದು<br />ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>ತಾಲ್ಲೂಕಿನ ಮೆಣಸಿ ಕೆರೆ ಅಂಗಳದಲ್ಲಿ ತರಕಾರಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಜಲಚರಗಳು ಸಾಯುವ ಅಪಾಯ ಎದುರಾಗಿದೆ ಎಂದು ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ ತಿಳಿಸಿದರು.</p>.<p>ಮೆಣಸಿ ಕೆರೆ ನಗರಕ್ಕೆ ಸಮೀಪ ಇರುವುದರಿಂದ ತರಕಾರಿ, ಕೋಳಿ ಹಾಗೂ ಹಳೆ ಬಟ್ಟೆಗಳ ತಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಇರುವ ಮೀನು, ಕಪ್ಪೆ ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಸಾಯುತ್ತಿವೆ. ಕೆರೆ ಅಂಗಳದ ನೀರಿನಲ್ಲಿರುವ ಮೀನು, ಇತರೆ ಪ್ರಾಣಿಗಳನ್ನು ತಿನ್ನಲು ಬರುವ ಕೊಕ್ಕರೆಗಳ ಕಾಲುಗಳಿಗೆ ಪ್ಲಾಸ್ಟಿಕ್ ದಾರಗಳು ಸುತ್ತಿಕೊಂಡು ಮರದಲ್ಲಿ ಕುಳಿತಾಗ ರಂಬೆಗಳಿಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಮೆಣಸಿ ಕೆರೆ ಅಂಗಳದಲ್ಲಿ ಜಾಲಿ ಮರಗಳು ಹೆಚ್ಚಾಗಿರುವುದರಿಂದ ಕೊಕ್ಕರೆಗಳ ಕಾಲಿನಲ್ಲಿರುವ ದಾರ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡು ಹಾರಲು ಆಗದೆ ಪ್ರಾಣ ಬಿಡುತ್ತಿವೆ ಎಂದರು.</p>.<p>ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆ ಸ್ವಚ್ಛತೆ ಕಡೆಗೆ ಗಮನ ನೀಡಬೇಕು ಎಂದು<br />ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>