ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನ ಮೃಗಾಲಯ ಹಿಮಾಲಯದ ಕಪ್ಪು ಕರಡಿ ಮೋಹನ್ (27) ವಯೋಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರಡಿ ಮೋಹನ್ನನ್ನು ಬೆಳಗಾವಿ ನ್ಯೂ ಗ್ರ್ಯಾಂಡ್ ಸರ್ಕಸ್ನಿಂದ 2002ರಲ್ಲಿ ಸಂರಕ್ಷಿಸಿ ಜೈವಿಕ ಉದ್ಯಾನದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಲಿಂಪೋ ಸರ್ಕೋಮಾ (ಹಾನಿಕರಕ ಗಡ್ಡೆ) ಎಂಬ ಕಾಯಿಲೆಯಿಂದ ಬಳಲುತ್ತಿತ್ತು. 15 ದಿನಗಳಿಂದ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿದೆ.