ದೇವನಹಳ್ಳಿ: ನಂದಿ ಗಿರಿಧಾಮ ರಸ್ತೆಯಲ್ಲಿ ಮಂಗಳವಾರ ವ್ಹೀಲಿಂಗ್ ಮಾಡಲು ಹೋಗಿ ದ್ವಿಚಕ್ರ ವಾಹನ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಬೆಂಗಳೂರಿನ ಯುವಕರ ಗುಂಪೊಂದು ಕಾರಹಳ್ಳಿ ಬಳಿ ವ್ಹೀಲಿಂಗ್ ಮಾಡುತ್ತಿದ್ದಾಗ ಬೆಂಗಳೂರು ನಿವಾಸಿ ಆದಿಲ್ (25) ಎಂಬ ಯುವಕ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೇನಹಳ್ಳಿ ಸಮೀಪ ಮುನೇಗೌಡ (40) ಎಂಬುವರ ಬೈಕ್ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.