ಸೋಂಕಿತ ವ್ಯಕ್ತಿ ಕೇಸ್ ನಂ.1236 ಆಗಿದೆ. ಈ ವ್ಯಕ್ತಿಯು ತಮಿಳುನಾಡು ಮೂಲದವರಾಗಿದ್ದು ಮೇ 8ರಂದು ಕರ್ನಾಟಕಕ್ಕೆ ಬಂದಿದ್ದಾರೆ. ವೃತ್ತಿಯಲ್ಲಿ ಫಿಸಿಯೊಥೆರಫಿಸ್ಟ್ ಆಗಿರುವ ಇವರು ಮಾರತಹಳ್ಳಿ, ಬೇಗೂರು, ಚಂದಾಪುರ ಜಿಪಿಆರ್ ಬಡಾವಣೆಗಳಿಗೆ ಭೇಟಿ ನೀಡಿದ್ದಾರೆ. ಪತ್ನಿ ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿರುವ 13 ಮಂದಿ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ 7 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದ್ದು ಅವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ. ಇವರ ತಪಾಸಣೆ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್ ತಿಳಿಸಿದ್ದಾರೆ.