ಹೊನ್ನೇನಹಳ್ಳಿ ಗ್ರಾಮದ ರವಿಕುಮಾರ್ ಶಿವಗಂಗೆ ಮುಖ್ಯರಸ್ತೆಯಲ್ಲಿ ಚಿಲ್ಲರೆ ಅಂಗಡಿಯನ್ನಿಟ್ಟುಕೊಂಡಿದ್ದಾರೆ. ಎಂದಿನಂತೆ ವ್ಯಾಪಾರ ಮುಗಿಸಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಶುಕ್ರವಾರ ಅಂಗಡಿ ಹತ್ತಿರ ಬಂದು ಬಾಗಿಲು ತೆರೆಯಲು ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ₹10 ಸಾವಿರ ನಗದು ಹಾಗೂ ₹2 ಸಾವಿರ ಬೆಲೆಯ ಸಿಗರೇಟ್ ಪ್ಯಾಕ್ಗಳನ್ನು ಕದ್ದೊಯ್ದಿದ್ದಾರೆ.