<p>ಕನಕಪುರ: ‘ಸಾಲದ ಒತ್ತಡದಿಂದ ಕಂಗೆಟ್ಟು ಅದರಿಂದ ಆಚೆ ಬರಲಾಗದೆ ಡೆತ್ನೋಟ್ ಬರೆದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.</p>.<p>ಇಲ್ಲಿನ ಬಾಣಂತ ಮಾರಮ್ಮ ಬಡಾವಣೆ ನಿವಾಸಿ, ರೂರಲ್ ಕಾಲೇಜಿನ ಉಪನ್ಯಾಸಕ ನಾಗೇಶ್ (62) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ಪತ್ನಿ, ಮಗ ಮತ್ತು ಮಗಳಿದ್ದಾರೆ.</p>.<p>ಬುಧವಾರ ಮಧ್ಯಾಹ್ನ ಕುಟುಂಬದವರ ಜತೆ ಸ್ನೇಹಿತರ ಮನೆಗೆ ಹೋಗಿ ಹಬ್ಬದ ಊಟ ಮುಗಿಸಿಕೊಂಡು ಬಂದವರು ಸಂಜೆ 6ಕ್ಕೆ ಗೆಟ್ ಟುಗೆದರ್ ಪಾರ್ಟಿ ಇದೆ. ಮುಗಿಸಿಕೊಂಡು ಬರುತ್ತೇನೆ ಎಂದು ಪತ್ನಿಗೆ ಹೇಳಿ ಹೋದವರು ತಮ್ಮ ಜಮೀನಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಮೃತರ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಸಿದ್ದಾರೆ.</p>.<p>ಡೆತ್ನೋಟ್ ಏನಿದೆ: ’ನಾನು ಹಣಕಾಸಿನ ವ್ಯವಹಾರ ನಡೆಸುತ್ತಿದ್ದೆ. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ನಂತರದಲ್ಲಿ ನನ್ನಿಂದ ಸಾಲ ಪಡೆದವರು ಬಡ್ಡಿ ನೀಡಿಲ್ಲ. ಮರು ಪಾತಿಸಿಲ್ಲ. ನಾನು ಮಾತ್ರ ಸಾಲ ಪಡೆದವರಿಗೆ ತಿಂಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದೆ. ₹7ಕೋಟಿ ಬಡ್ಡಿ ಕಟ್ಟಿದ್ದೇನೆ. ಸಾಲ ತೀರಿಸಲು ₹4ಕೋಟಿ ಆಸ್ತಿ, ಮನೆ ಮಾರಿದ್ದೇನೆ. ನನಗೆ ಕೊಡಬೇಕಾದವರೂ ವಾಪಸ್ ಹಣ ಕೊಡುತ್ತಿರಲಿಲ್ಲ. ನಾನು ತಿಂಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ.‘</p>.<p>‘ಸಾಲಗಾರರ ಒತ್ತಡದಿಂದ ಹೀಗೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಡೆತ್ ನೋಟ್ ಕೊನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ‘ಸಾಲದ ಒತ್ತಡದಿಂದ ಕಂಗೆಟ್ಟು ಅದರಿಂದ ಆಚೆ ಬರಲಾಗದೆ ಡೆತ್ನೋಟ್ ಬರೆದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.</p>.<p>ಇಲ್ಲಿನ ಬಾಣಂತ ಮಾರಮ್ಮ ಬಡಾವಣೆ ನಿವಾಸಿ, ರೂರಲ್ ಕಾಲೇಜಿನ ಉಪನ್ಯಾಸಕ ನಾಗೇಶ್ (62) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ಪತ್ನಿ, ಮಗ ಮತ್ತು ಮಗಳಿದ್ದಾರೆ.</p>.<p>ಬುಧವಾರ ಮಧ್ಯಾಹ್ನ ಕುಟುಂಬದವರ ಜತೆ ಸ್ನೇಹಿತರ ಮನೆಗೆ ಹೋಗಿ ಹಬ್ಬದ ಊಟ ಮುಗಿಸಿಕೊಂಡು ಬಂದವರು ಸಂಜೆ 6ಕ್ಕೆ ಗೆಟ್ ಟುಗೆದರ್ ಪಾರ್ಟಿ ಇದೆ. ಮುಗಿಸಿಕೊಂಡು ಬರುತ್ತೇನೆ ಎಂದು ಪತ್ನಿಗೆ ಹೇಳಿ ಹೋದವರು ತಮ್ಮ ಜಮೀನಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಮೃತರ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಸಿದ್ದಾರೆ.</p>.<p>ಡೆತ್ನೋಟ್ ಏನಿದೆ: ’ನಾನು ಹಣಕಾಸಿನ ವ್ಯವಹಾರ ನಡೆಸುತ್ತಿದ್ದೆ. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ನಂತರದಲ್ಲಿ ನನ್ನಿಂದ ಸಾಲ ಪಡೆದವರು ಬಡ್ಡಿ ನೀಡಿಲ್ಲ. ಮರು ಪಾತಿಸಿಲ್ಲ. ನಾನು ಮಾತ್ರ ಸಾಲ ಪಡೆದವರಿಗೆ ತಿಂಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದೆ. ₹7ಕೋಟಿ ಬಡ್ಡಿ ಕಟ್ಟಿದ್ದೇನೆ. ಸಾಲ ತೀರಿಸಲು ₹4ಕೋಟಿ ಆಸ್ತಿ, ಮನೆ ಮಾರಿದ್ದೇನೆ. ನನಗೆ ಕೊಡಬೇಕಾದವರೂ ವಾಪಸ್ ಹಣ ಕೊಡುತ್ತಿರಲಿಲ್ಲ. ನಾನು ತಿಂಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ.‘</p>.<p>‘ಸಾಲಗಾರರ ಒತ್ತಡದಿಂದ ಹೀಗೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಡೆತ್ ನೋಟ್ ಕೊನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>