<p><strong>ಆನೇಕಲ್: </strong>ತಾಲ್ಲೂಕು ಹಸಿರುಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸಮೀಪ ರೈತರೇ ಪ್ರಾರಂಭಿಸಿರುವ ಗೊಬ್ಬರ ಮತ್ತು ಕ್ರಿಮಿನಾಶಕ ಮಳಿಗೆಯನ್ನು ಸಂಘದ ಅಧ್ಯಕ್ಷ ಕೂನಮಡಿವಾಳ ವೈ.ಸೋಮಣ್ಣ ಅವರು ಸೋಮವಾರ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ಹಸಿರುಮನೆ ಬೆಳೆಗಾರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಸಿರು ಮನೆಯಲ್ಲಿ ಬೆಳೆದ ಹೂವುಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವಂತೆ ಕೋರಲಾಗಿತ್ತು. ಬಜೆಟ್ನಲ್ಲಿ ಬೆಂಗಳೂರು ನಗರ ಜಿಲ್ಲೆಗೆ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪಿಸುವ ವಿಷಯ ಪ್ರಸ್ತಾಪವಾಗಿದೆ. ಆನೇಕಲ್ನಲ್ಲಿಯೇ ಸ್ಥಾಪಿಸಬೇಕು ಎಂಬುದು ಸಂಘದ ಒತ್ತಾಯವಾಗಿದೆ ಎಂದು ತಿಳಿಸಿದರು.</p>.<p>ಹಸಿರುಮನೆ ಬೆಳೆಗಳನ್ನು ವಾಣಿಜ್ಯ ಬೆಲೆ ಎಂದು ಪರಿಗಣಿಸಿ ಬೆಸ್ಕಾಂನಿಂದ ಹೆಚ್ಚು ವಿದ್ಯುತ್ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡಲು ಕೋರಲಾಗಿದೆ. ಕೃತಕ ಹೂವುಗಳನ್ನು ಕಲ್ಯಾಣಮಂಟಪ ಮತ್ತು ಸಭೆ ಸಮಾರಂಭಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ. ಈ ಬೇಡಿಕೆಗೆ ಈಡೇರಿಕೆಗಾಗಿ ಸಂಘವು ಪ್ರಯತ್ನ ನಡೆಸಲಿದೆ ಎಂದರು.</p>.<p>ಸಂಘವು ಪ್ರಾರಂಭಿಸಿದ ಈ ಮಳಿಗೆಯಿಂದಾಗಿ ಗುಣಮಟ್ಟದ ಗೊಬ್ಬರ, ಕ್ರಿಮಿನಾಶಕ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿರ್ವಹಣೆಗಾಗಿ ಮಾತ್ರ ಲಾಭ ಪಡೆಯಲಾಗುತ್ತದೆ ಎಂದರು.</p>.<p>ಸಂಘವು ಈ ತೀರ್ಮಾನ ಕೈಗೊಂಡಾಗ ಹಲವಾರು ಮಂದಿ ರೈತರು ಸಂಘಕ್ಕೆ ಕೊಡುಗೆ ನೀಡಿದ್ದು ಸುಮಾರು ₹35 ಲಕ್ಷ ವೆಚ್ಚದಲ್ಲಿ ಲಾಭರಹಿತ ಮಳಿಗೆ ಸ್ಥಾಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೇ ಕಂಪನಿಗಳಿಂದ ನೇರವಾಗಿ ರೈತರಿಗೆ ಗೊಬ್ಬರು ಮತ್ತು ಕ್ರಿಮಿನಾಶಕ ದೊರೆಯುವಂತೆ ಮಾಡಲಾಗಿದೆ ಎಂದರು.</p>.<p>ದೊಡ್ಡಹಾಗಡೆ ಹರೀಶ್, ಪಾರ್ಥಪ್ಪ, ಸಂಘದ ಉಪಾಧ್ಯಕ್ಷ ಬಿ.ಲೋಕೇಶ್ ರೆಡ್ಡಿ, ಕಾರ್ಯದರ್ಶಿ ಮೋಹನ್, ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಅಶೋಕ್, ದೊಡ್ಡಹಾಗಡೆ ಮಧು, ರಾಮಕೃಷ್ಣಪ್ಪ, ವೆಂಕಟೇಶ್, ಕೀರ್ತನಾ, ಗೋಪಾಲರೆಡ್ಡಿ, ಮಲ್ಲೇಶ್, ಶಿವಕುಮಾರ್, ವಿಜಯಕುಮಾರ್, ಪ್ರಸಾದ್ ರೆಡ್ಡಿ, ಜಯಶಂಕರರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕು ಹಸಿರುಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸಮೀಪ ರೈತರೇ ಪ್ರಾರಂಭಿಸಿರುವ ಗೊಬ್ಬರ ಮತ್ತು ಕ್ರಿಮಿನಾಶಕ ಮಳಿಗೆಯನ್ನು ಸಂಘದ ಅಧ್ಯಕ್ಷ ಕೂನಮಡಿವಾಳ ವೈ.ಸೋಮಣ್ಣ ಅವರು ಸೋಮವಾರ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ಹಸಿರುಮನೆ ಬೆಳೆಗಾರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಸಿರು ಮನೆಯಲ್ಲಿ ಬೆಳೆದ ಹೂವುಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವಂತೆ ಕೋರಲಾಗಿತ್ತು. ಬಜೆಟ್ನಲ್ಲಿ ಬೆಂಗಳೂರು ನಗರ ಜಿಲ್ಲೆಗೆ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪಿಸುವ ವಿಷಯ ಪ್ರಸ್ತಾಪವಾಗಿದೆ. ಆನೇಕಲ್ನಲ್ಲಿಯೇ ಸ್ಥಾಪಿಸಬೇಕು ಎಂಬುದು ಸಂಘದ ಒತ್ತಾಯವಾಗಿದೆ ಎಂದು ತಿಳಿಸಿದರು.</p>.<p>ಹಸಿರುಮನೆ ಬೆಳೆಗಳನ್ನು ವಾಣಿಜ್ಯ ಬೆಲೆ ಎಂದು ಪರಿಗಣಿಸಿ ಬೆಸ್ಕಾಂನಿಂದ ಹೆಚ್ಚು ವಿದ್ಯುತ್ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡಲು ಕೋರಲಾಗಿದೆ. ಕೃತಕ ಹೂವುಗಳನ್ನು ಕಲ್ಯಾಣಮಂಟಪ ಮತ್ತು ಸಭೆ ಸಮಾರಂಭಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ. ಈ ಬೇಡಿಕೆಗೆ ಈಡೇರಿಕೆಗಾಗಿ ಸಂಘವು ಪ್ರಯತ್ನ ನಡೆಸಲಿದೆ ಎಂದರು.</p>.<p>ಸಂಘವು ಪ್ರಾರಂಭಿಸಿದ ಈ ಮಳಿಗೆಯಿಂದಾಗಿ ಗುಣಮಟ್ಟದ ಗೊಬ್ಬರ, ಕ್ರಿಮಿನಾಶಕ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿರ್ವಹಣೆಗಾಗಿ ಮಾತ್ರ ಲಾಭ ಪಡೆಯಲಾಗುತ್ತದೆ ಎಂದರು.</p>.<p>ಸಂಘವು ಈ ತೀರ್ಮಾನ ಕೈಗೊಂಡಾಗ ಹಲವಾರು ಮಂದಿ ರೈತರು ಸಂಘಕ್ಕೆ ಕೊಡುಗೆ ನೀಡಿದ್ದು ಸುಮಾರು ₹35 ಲಕ್ಷ ವೆಚ್ಚದಲ್ಲಿ ಲಾಭರಹಿತ ಮಳಿಗೆ ಸ್ಥಾಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೇ ಕಂಪನಿಗಳಿಂದ ನೇರವಾಗಿ ರೈತರಿಗೆ ಗೊಬ್ಬರು ಮತ್ತು ಕ್ರಿಮಿನಾಶಕ ದೊರೆಯುವಂತೆ ಮಾಡಲಾಗಿದೆ ಎಂದರು.</p>.<p>ದೊಡ್ಡಹಾಗಡೆ ಹರೀಶ್, ಪಾರ್ಥಪ್ಪ, ಸಂಘದ ಉಪಾಧ್ಯಕ್ಷ ಬಿ.ಲೋಕೇಶ್ ರೆಡ್ಡಿ, ಕಾರ್ಯದರ್ಶಿ ಮೋಹನ್, ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಅಶೋಕ್, ದೊಡ್ಡಹಾಗಡೆ ಮಧು, ರಾಮಕೃಷ್ಣಪ್ಪ, ವೆಂಕಟೇಶ್, ಕೀರ್ತನಾ, ಗೋಪಾಲರೆಡ್ಡಿ, ಮಲ್ಲೇಶ್, ಶಿವಕುಮಾರ್, ವಿಜಯಕುಮಾರ್, ಪ್ರಸಾದ್ ರೆಡ್ಡಿ, ಜಯಶಂಕರರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>