‘ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿಯ ಎಸ್ಪಿಜಿ ಆಸ್ಪತ್ರೆಯಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣ ಹಾಗೂ ನೆಲಮಂಗಲದ ಆಸರೆ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ 74 ಗರ್ಭಪಾತ ಮಾಡಿದ ಪ್ರಕರಣದ ವರದಿಯನ್ನು ಡಿಎಚ್ಒಗೆ ಮೌಖಿಕವಾಗಿ ತಿಳಿಸಿದೆ. ಆಗ ಅವರು, ಲಿಖಿತ ವರದಿ ಸಲ್ಲಿಸದಂತೆ ತಾಕೀತು ಮಾಡಿದರು. ಅಲ್ಲದೇ, ವರದಿ ಸಲ್ಲಿಸಿದರೆ ಸಮಸ್ಯೆ ಎದುರಿಸಬೇಕಾದಿತು ಎಂದು ಬೆದರಿಕೆಯನ್ನೂ ಹಾಕಿದರು’ ಎಂದು ಡಾ. ಮಂಜುನಾಥ್ ಆರೋಪಿಸಿದ್ದಾರೆ.