ಬಸವರಾಜ ಅವರು ಎರಡೂವರೆ ತಿಂಗಳ ಹಿಂದೆಯಷ್ಟೇ ಶುಂಠಿ ನಾಟಿ ಮಾಡಿದ್ದರು. ಕೊಯ್ಲಿಗೆ ಬರಲು ಇನ್ನೂ ನಾಲ್ಕು ತಿಂಗಳು ಬೇಕಿತ್ತು. ಇನ್ನೂ ಈಗಷ್ಟೇ ಗಡ್ಡೆ ಕಟ್ಟುತ್ತಿರುವ ಎರಡು ಚೀಲದಷ್ಟು ಎಳೆಯ ಶುಂಠಿಯನ್ನು ರಾತ್ರಿ ವೇಳೆ ಸಸಿಗಳ ಸಮೇತ ಕಿತ್ತೊಯ್ಯಲಾಗಿದೆ. ಈ ಬಗ್ಗೆ ದೂರು ದಾಖಲಾಗಿಲ್ಲ. ಟೊಮೆಟೊ ಕಳುವಾದ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು ಎಂದು ಜಗದೀಶ್ ಹೇಳಿದ್ದಾರೆ.