ಆನೆಗಳು ಸಂಭ್ರಮಿಸಲು ವಿವಿಧ ಚಟುವಟಿಕೆ ಉದ್ಯಾನದಲ್ಲಿ ರೂಪಿಸಲಾಗಿತ್ತು. ರೀಟಾ ಎಂಬ ಹೆಣ್ಣಾನೆಯನ್ನು ದುಬೈನಲ್ಲಿ ನೆಲೆಸಿರುವ ಅಮಿತ್ ನಾರಂಗ್ ಎಂಬುವವರು ದತ್ತು ಪಡೆದರು. ಮೃಗಾಲಯಕ್ಕೆ ಶ್ರಮದಾನ ಎಂಬ ಕಾರ್ಯಕ್ರಮದ ಮೂಲಕ ನಾಗರಿಕರು, ವನ್ಯಜೀವಿ ಆಸಕ್ತರು, ಉದ್ಯಾನದಲ್ಲಿ ಮೇವಿನ ಕೊಯ್ಲು ಮಾಡಲು ಅವಕಾಶಕಲ್ಪಿಸಲಾಗಿತ್ತು. ಕಟಾವು ಮಾಡಿದ ಮೇವನ್ನು ಮಾವುತರು ಆನೆಗಳಿಗೆ ನೀಡುವ ಮೂಲಕ ಸಂಭ್ರಮಿಸಿದರು. ಪ್ರವಾಸಿಗರಿಗೆ ಆನೆಗಳಿಗೆ ಮೇವು ನೀಡಿದ ಸಂತೃಪ್ತಿ ಉಂಟಾಯಿತು. ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿನಿರ್ವಹಣೆ, ಕಾಡಿನಲ್ಲಿ ಎದುರಿಸುವ ಸಮಸ್ಯೆ, ಅಳಿವಿನಂಚಿನಲ್ಲಿರುವ ಆನೆಗಳ ಬಗ್ಗೆ ಮಾಹಿತಿನೀಡಲಾಯಿತು.