<p><strong>ನೆಲಮಂಗಲ</strong>: ಸಂವಿಧಾನ ಓದು ಅಭಿಯಾನ - ಕರ್ನಾಟಕ ಮತ್ತು ಹರ್ಷ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಫೆಬ್ರುವರಿ 28ರಂದು ಸಂವಿಧಾನದ ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. </p><p>ಸ್ಪರ್ಧೆಯ ವಿಜೇತರಿಗೆ ಪ್ರಥಮ ₹ 15,000, ದ್ವಿತೀಯ ₹ 10,000, ತೃತೀಯ ₹ 5,000, ತಲಾ ₹ 1,000 ಸಮಾಧಾನಕರ ಬಹುಮಾನವೂ ಇರಲಿದೆ.</p><p>ಈ ಸ್ಪರ್ಧೆಗೆ ಜಿಲ್ಲಾ ವ್ಯಾಪ್ತಿಯ ಒಂದು ಕಾಲೇಜಿನಿಂದ 5 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಸ್ಪರ್ಧಿಗಳು ಪ್ರಾಂಶುಪಾಲರ ದೃಢೀಕರಣ ಪತ್ರ ತರುವುದು ಕಡ್ಡಾಯ.</p><p>ಸ್ಪರ್ಧಿಗಳು, ಸಂವಿಧಾನ ಮತ್ತು ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಮಹಿಳೆ, ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆʼ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. </p><p>ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಲು ಅವಕಾಶವಿದೆ.</p><p>ಆಸಕ್ತರು ಆಯೋಜಕರಾದ ಸಂಜಯ್ ಎಲ್.ಎ. (9606945415) ಹಾಗೂ ಬಿ.ರಾಜಶೇಖರಮೂರ್ತಿ (9448324727) ಅವರನ್ನು ಸಂಪರ್ಕಿಸಬಹುದು.</p>
<p><strong>ನೆಲಮಂಗಲ</strong>: ಸಂವಿಧಾನ ಓದು ಅಭಿಯಾನ - ಕರ್ನಾಟಕ ಮತ್ತು ಹರ್ಷ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಫೆಬ್ರುವರಿ 28ರಂದು ಸಂವಿಧಾನದ ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. </p><p>ಸ್ಪರ್ಧೆಯ ವಿಜೇತರಿಗೆ ಪ್ರಥಮ ₹ 15,000, ದ್ವಿತೀಯ ₹ 10,000, ತೃತೀಯ ₹ 5,000, ತಲಾ ₹ 1,000 ಸಮಾಧಾನಕರ ಬಹುಮಾನವೂ ಇರಲಿದೆ.</p><p>ಈ ಸ್ಪರ್ಧೆಗೆ ಜಿಲ್ಲಾ ವ್ಯಾಪ್ತಿಯ ಒಂದು ಕಾಲೇಜಿನಿಂದ 5 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಸ್ಪರ್ಧಿಗಳು ಪ್ರಾಂಶುಪಾಲರ ದೃಢೀಕರಣ ಪತ್ರ ತರುವುದು ಕಡ್ಡಾಯ.</p><p>ಸ್ಪರ್ಧಿಗಳು, ಸಂವಿಧಾನ ಮತ್ತು ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಮಹಿಳೆ, ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆʼ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. </p><p>ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಲು ಅವಕಾಶವಿದೆ.</p><p>ಆಸಕ್ತರು ಆಯೋಜಕರಾದ ಸಂಜಯ್ ಎಲ್.ಎ. (9606945415) ಹಾಗೂ ಬಿ.ರಾಜಶೇಖರಮೂರ್ತಿ (9448324727) ಅವರನ್ನು ಸಂಪರ್ಕಿಸಬಹುದು.</p>