‘ಹಣ್ಣು, ತರಕಾರಿ ಮಾರಾಟಕ್ಕೆ ಎಪಿಎಂಸಿಗಳಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿ ಮಾರಾಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಹೊರಗಿನಿಂದಲು ಸಹ ವ್ಯಾಪಾರಸ್ಥರು ಬಂದು ಹೋಗಲು ಅನುಕೂಲ ಮಾಡಿಕೊಡಲಾಗಿದೆ. ಸಾಮಾನ್ಯ ಸ್ಥಿತಿಯಲ್ಲಿ ರೈತರು ಬೆಳೆದಿದ್ದ ಹಣ್ಣು, ತರಕಾರಿಗಳಿಗೆ ದೊರೆಯುತ್ತಿದ್ದಷ್ಟು ಬೆಲೆ ಈಗ ದೊರೆಯದೇ ಇರಬಹುದು. ಆದರೆ ಸದ್ಯದ ಸಂಕಷ್ಟದ ಸ್ಥಿತಿಯಲ್ಲಿ ಯಾವುದೇ ತರಕಾರಿ, ಹಣ್ಣು ಹಾಳಾಗದಂತೆ ಬೆಳೆ ಬೆಳೆಯಲು ಮಾಡಲಾಗಿದ್ದ ಖರ್ಚಾದರೂ ಬರುವಂತೆ ಮಾಡಲಾಗಿದೆ’ ಎಂದರು.