‘ನಾವು ಕೂಲಿ ಮಾಡಿ ಬದುಕು ನಡೆಸುವ ಜನ. ಇದರಲ್ಲೇ ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು. ಸಿಲಿಂಡರ್ಗೆ ₹1,150 ಕೊಡುವುದು ಕಷ್ಟವಾಗಿದೆ. ಸಿಲಿಂಡರ್ ಒಲೆಯಲ್ಲೆ ಅಡುಗೆ ಮಾಡಬೇಕೆಂದರೆ ಸಾಲ ಮಾಡಬೇಕಾಗುತ್ತದೆ. ಹೀಗಾಗಿ ಸೌದೆ ಒಲೆಯ ಅಡುಗೆಯೇ ಅನುಕೂಲ’ ಎನ್ನುತ್ತಾರೆ ಮುದ್ದೇನಹಳ್ಳಿಯ ನಾರಾಯಣಮ್ಮ.