ಅಭಿಮಾನಿಯ ಭಾವುಕ ಪತ್ರ: ಸದ್ಯ ರಾಮನಗರದ ಗಾಂಧಿ ನಗರದಲ್ಲಿ ವಾಸವಿದ್ದ ಜಯರಾಂ, ಆಪೆ ಅಟೊ ಓಡಿಸಿ ಜೀವನ ಸಾಗಿಸುತ್ತಿದ್ದರು. ಅವರ ಎಡಗಾಲಿಗೆ ಗ್ಯಾಂಗ್ರೀನ್ ಆಗಿದ್ದು, ಕ್ರಮೇಣ ಆರೋಗ್ಯ ವಿಷಮಿಸಿತ್ತು. ಇದರಿಂದ ಬೇಸತ್ತ ಜಯರಾಂ ತಾವು ಸಾಯುವ ಮುನ್ನ ಪತ್ರ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದರು. ‘ನಾನು ಆಗಿನಿಂದಲೂ ಜೆಡಿಎಸ್ ಹಾಗೂ ಕುಮಾರಣ್ಣನ ಅಭಿಮಾನಿ. ಹೀಗಾಗಿ ನನ್ನ ಮರಣಾನಂತರ ಅಂತಿಮ ಸಂಸ್ಕಾರಕ್ಕೆ ಕುಮಾರಸ್ವಾಮಿ ಬರಬೇಕು. ಬುದ್ಧಿಮಾಂದ್ಯ ಮಗನಿಗೆ ನೆರವಾಗಬೇಕು. ಅವರ ಋಣವನ್ನು ಮುಂದಿನ ಜನ್ಮದಲ್ಲಿ ಖಂಡಿತ ತೀರಿಸುತ್ತೇನೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದರು. ತಮ್ಮೊಡನೆ ಒಡನಾಡಿದ ಶಂಕರ್ನಾಗ್ ಆಟೊ ಚಾಲಕರ ಸಂಘದ ಸದಸ್ಯರು, ಕುಟುಂಬಸ್ಥರು, ರಂಗಭೂಮಿ ಕಲಾವಿದರಿಗೂ ಅವರು ಅಂತಿಮ ನಮಸ್ಕಾರ ಹೇಳಿದ್ದರು.