<p>ಹೊಸಕೋಟೆ: ತಾಲ್ಲೂಕಿನ ನಿಂಬೇಕಾಯಿಪುರದ ಬಳಿ ಇರುವ ಜನಪದರು ರಂಗವೇದಿಕೆಯಲ್ಲಿ ರಂಗಮಾಲೆ 83ರ ಅಂಗವಾಗಿ ಈಚೆಗೆ ಪ್ರದರ್ಶನಗೊಂಡ ‘ಮುದುಕನ ಮದುವೆ’ ನಾಟಕ ಜನರ ಮನ ಗೆದ್ದಿತು.</p>.<p>ನಾಟಕ ರಚನಕಾರ ಬಿ.ಬಿ.ದತ್ತರಗಿ ರಚನ ಈ ನಾಟಕವನ್ನು ಬೆಂಗಳೂರಿನ ಸಾಫಲ್ಯ ರಂಗತಂಡ ಮಲ್ಲಿಕಾರ್ಜುನ ನಿರ್ದೇಶನದಲ್ಲಿ ಅಭಿನಯಿಸಿತು.</p>.<p>ಕಂಪನಿ ಶೈಲಿಯ ಸಾಮಾಜಿಕ ಹಾಸ್ಯ ಪ್ರಧಾನ್ಯವಾಗಿದ್ದು ನಾಟಕ, ಕಚಗುಳಿಯಿಡುವ ಸಂಭಾಷಣೆಯಿಂದ ನೆರೆದಿದ್ದ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ, ರಂಜಿಸಿತು. ಪ್ರೇಕ್ಷರು ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿ ನಟರನ್ನು ಪ್ರೋತ್ತಾಹಿಸಿದರು.</p>.<p>ನಾಟಕದಲ್ಲಿ ಚಲನಚಿತ್ರ, ಕಿರುತೆರೆಯ ನಟ ಎಂ.ಎನ್.ಸುರೇಶ್, ಜ್ಯೂನಿಯರ್ ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. </p>.<p>ಜನಪದರು ವೇದಿಕೆಯ ಅಧ್ಯಕ್ಷ ಪಾಪಣ್ಣ ಮಾತನಾಡಿ, ಜೀವನದ ಜಂಟಾಜದಲ್ಲಿ ಎಲ್ಲವನ್ನೂ ಮರೆತು ಕೆಲಕಾಲ ಆನಂದ ಪಡೆಯಲು ರಂಗಭೂಮಿ ಉತ್ತಮ ವೇದಿಕೆಯಾಗಿದೆ. ಇಂದು ಪ್ರದರ್ಶನಗೊಂಡ ಮುದುಕನ ಮದುವೆ ಹಾಸ್ಯಪ್ರಧಾನ ನಾಟಕವಾಗಿದ್ದು, ಜನರ ಚಿತ್ರವನ್ನು ಕೆಲಕಾಲ ತನ್ನತ್ತ ಸೆಳೆದಿದ್ದು ದಿಟ ಎಂದರು.</p>.<p>ನಾಟಕದಲ್ಲಿ ಎಂ.ಎನ್.ಸುರೇಶ, ಶ್ರೀಧರ್ ತುರವೇಕೆರೆ, ಲಕ್ಷ್ಮಿ ಶ್ರೀಧರ್, ಜೂ. ವಿಷ್ಣು ರಾಜು, ಮಂಡ್ಯ ಜಯರಾಮ್, ಶ್ರೀದೇವಿ, ವಿವೇಕ, ಜಯಶ್ರೀ ರಾಜು ಅಭಿನಯಿಸಿದರು. ತಾಂತ್ರಿಕ ವರ್ಗದಲ್ಲಿ ಕೀಬೋರ್ಡ್ ವಾದಕರಾಗಿ ಮಧು, ಪ್ಯಾಡ್ ವಾದಕ ಪುನೀತ್ ಇದ್ದರು.</p>.<p>ಈ ಸಂದರ್ಭದಲ್ಲಿ ನಾಟಕದ ಪ್ರಾಯೋಜಕರಾದ ಜ್ಯೋತಿಪುರ ಶ್ರೀವೇಣು, ದೊಡ್ಟಬನಹಳ್ಳಿ ಸಿದ್ಧೇಶ್ವರ ನನಸುಮನೆ, ಎಂ ಸುರೇಶ್, ಶಿವಕುಮಾರ್, ಮುನಿರಾಜಪ್ಪ ಮುಂತಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಕೋಟೆ: ತಾಲ್ಲೂಕಿನ ನಿಂಬೇಕಾಯಿಪುರದ ಬಳಿ ಇರುವ ಜನಪದರು ರಂಗವೇದಿಕೆಯಲ್ಲಿ ರಂಗಮಾಲೆ 83ರ ಅಂಗವಾಗಿ ಈಚೆಗೆ ಪ್ರದರ್ಶನಗೊಂಡ ‘ಮುದುಕನ ಮದುವೆ’ ನಾಟಕ ಜನರ ಮನ ಗೆದ್ದಿತು.</p>.<p>ನಾಟಕ ರಚನಕಾರ ಬಿ.ಬಿ.ದತ್ತರಗಿ ರಚನ ಈ ನಾಟಕವನ್ನು ಬೆಂಗಳೂರಿನ ಸಾಫಲ್ಯ ರಂಗತಂಡ ಮಲ್ಲಿಕಾರ್ಜುನ ನಿರ್ದೇಶನದಲ್ಲಿ ಅಭಿನಯಿಸಿತು.</p>.<p>ಕಂಪನಿ ಶೈಲಿಯ ಸಾಮಾಜಿಕ ಹಾಸ್ಯ ಪ್ರಧಾನ್ಯವಾಗಿದ್ದು ನಾಟಕ, ಕಚಗುಳಿಯಿಡುವ ಸಂಭಾಷಣೆಯಿಂದ ನೆರೆದಿದ್ದ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ, ರಂಜಿಸಿತು. ಪ್ರೇಕ್ಷರು ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿ ನಟರನ್ನು ಪ್ರೋತ್ತಾಹಿಸಿದರು.</p>.<p>ನಾಟಕದಲ್ಲಿ ಚಲನಚಿತ್ರ, ಕಿರುತೆರೆಯ ನಟ ಎಂ.ಎನ್.ಸುರೇಶ್, ಜ್ಯೂನಿಯರ್ ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. </p>.<p>ಜನಪದರು ವೇದಿಕೆಯ ಅಧ್ಯಕ್ಷ ಪಾಪಣ್ಣ ಮಾತನಾಡಿ, ಜೀವನದ ಜಂಟಾಜದಲ್ಲಿ ಎಲ್ಲವನ್ನೂ ಮರೆತು ಕೆಲಕಾಲ ಆನಂದ ಪಡೆಯಲು ರಂಗಭೂಮಿ ಉತ್ತಮ ವೇದಿಕೆಯಾಗಿದೆ. ಇಂದು ಪ್ರದರ್ಶನಗೊಂಡ ಮುದುಕನ ಮದುವೆ ಹಾಸ್ಯಪ್ರಧಾನ ನಾಟಕವಾಗಿದ್ದು, ಜನರ ಚಿತ್ರವನ್ನು ಕೆಲಕಾಲ ತನ್ನತ್ತ ಸೆಳೆದಿದ್ದು ದಿಟ ಎಂದರು.</p>.<p>ನಾಟಕದಲ್ಲಿ ಎಂ.ಎನ್.ಸುರೇಶ, ಶ್ರೀಧರ್ ತುರವೇಕೆರೆ, ಲಕ್ಷ್ಮಿ ಶ್ರೀಧರ್, ಜೂ. ವಿಷ್ಣು ರಾಜು, ಮಂಡ್ಯ ಜಯರಾಮ್, ಶ್ರೀದೇವಿ, ವಿವೇಕ, ಜಯಶ್ರೀ ರಾಜು ಅಭಿನಯಿಸಿದರು. ತಾಂತ್ರಿಕ ವರ್ಗದಲ್ಲಿ ಕೀಬೋರ್ಡ್ ವಾದಕರಾಗಿ ಮಧು, ಪ್ಯಾಡ್ ವಾದಕ ಪುನೀತ್ ಇದ್ದರು.</p>.<p>ಈ ಸಂದರ್ಭದಲ್ಲಿ ನಾಟಕದ ಪ್ರಾಯೋಜಕರಾದ ಜ್ಯೋತಿಪುರ ಶ್ರೀವೇಣು, ದೊಡ್ಟಬನಹಳ್ಳಿ ಸಿದ್ಧೇಶ್ವರ ನನಸುಮನೆ, ಎಂ ಸುರೇಶ್, ಶಿವಕುಮಾರ್, ಮುನಿರಾಜಪ್ಪ ಮುಂತಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>