ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ಆರನೇ ವಾರ್ಡಿನಲ್ಲಿರುವ ಪಾರ್ಕ್ ಹಾಗೂ ಬಸವನಕುಂಟೆ ಬಳಿಯರುವ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಆರನೇ ವಾರ್ಡ್ನ ಉದ್ಯಾನದಲ್ಲಿ ಕಿತ್ತುಹೋಗಿರುವ ಕಾಂಪೌಂಡ್ ಬೇಲಿಯನ್ನು ಸರಿಪಡಿಸಿದ ನಂತರ ಕಳೆಗಿಡಗಳನ್ನು ತೆರವು ಮಾಡಲಾಗುವುದು. ಇದರ ನಿರ್ವಹಣೆಗಾಗಿ ಸ್ಥಳೀಯರಿಗೆ ಗುತ್ತಿಗೆ ನೀಡಲು ತೀರ್ಮಾನ ಕೈಗೊಳ್ಳುತ್ತೇವೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಜನರು ಪುರಸಭೆಗೆ ದೂರು ಕೊಟ್ಟರೆ, ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.