ನಗರದ ಗಾಂಧಿ ಚೌಕ, ಗಂಗಾತಾಯಿ ದೇಗುಲ, ದರ್ಗಾದ ಬಳಿ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಎಲ್ಲಮ್ಮ ತಾಯಿ ದೇವಾಲಯ, ಗುರಪ್ಪನಮಠದಿಂದ ಬಸ್ ನಿಲ್ದಾಣ, ಏಳು ಸುತ್ತಿನ ಕೋಟೆ, ಸತ್ಯಮ್ಮ ತಾಯಿ ಕಾಲೋನಿ, ಶಿವಗಣೇಶಸರ್ಕಲ್, ಶಿಡ್ಲಘಟ್ಟಕ್ರಾಸ್, ಬಸವೇಶ್ವರ ನಗರ ಸೇರಿದಂತೆ ಪಟ್ಟಣದಾದ್ಯಂತ ಸಂಚರಿಸಿ ಸ್ಥಳೀಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿದರು. ಬೆಳಿಗ್ಗೆ 8 ಕ್ಕೆ ದೇವಾಲಯಕ್ಕೆ ಕರಗ ವಾಪಸಾಯಿತು.