ಕರಗ ಮಹೋತ್ಸವದ ಅಂಗವಾಗಿ ಹಸಿಕರಗ ಹಾಗೂ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಧರ್ಮರಾಯಸ್ವಾಮಿ ದೇವಾಲಯದಿಂದ ಏಳು ಸುತ್ತಿನ ಕೋಟೆಗೆ ಆಗಮಿಸಿ,ದೇವಾಲಯ ಟ್ರಸ್ಟ್ ಕಾರ್ಯಕಾರಿ ಸಮಿತಿ, ಅರ್ಚಕರು ಹಾಗೂ ಸೀಮಿತ ಕುಲಬಾಂಧವರ ಭಾಗವಹಿಸುವಿಕೆಯಿಂದ ಸಾಂಕೇತಿಕ ಕರಗ ನಡೆಸಲಾಯಿತು. ಸಾರ್ವಜನಿಕರಿಗೆ ಕರಗ ಉತ್ಸವದಲ್ಲಿ ಭಾಗವಹಿಸಲು ಅವಕಾಶವಿಲ್ಲದಿದ್ದರಿಂದ ನಿರಾಶೆಗೊಳ್ಳಬೇಕಾಯಿತು.