‘14ನೇ ಹಣಕಾಸು ಯೋಜನೆ ಅನುದಾನ, ನರೇಗಾದಲ್ಲಿ ಅಕ್ರಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ 25ರಷ್ಟು ಮೀಸಲು ಅನುದಾನ, ವಿಕಲ ಚೇತನರ ಶೇ 5ರಷ್ಟು ಮೀಸಲು ಹಣ ಫಲಾನುಭವಿಗಳಿಗೆ ಉಪಯೋಗ ಮಾಡಿಲ್ಲ. 2018ರ ಮಾರ್ಚ್ನಲ್ಲಿ ಅಮಾನತುಗೊಂಡು, ಬೇರೆಡೆ ವರ್ಗಾವಣೆಯಾಗಿದ್ದು, ಜಾಲಿಗೆ ಪಂಚಾಯಿತಿಯಲ್ಲಿ ಇಲಾಖೆ ತನಿಖೆ ನಡೆಸುತ್ತಿದೆ. ಇಷ್ಟೆಲ್ಲ ಬೆಳೆವಣಿಗೆ ಇರುವಾಗ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಕ್ಷ್ಯ ನಾಶಪಡಿಸಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಮತ್ತೆ ಮರು ವರ್ಗಾವಣೆಗೆ ಇಲಾಖೆ ಮುಂದಾಗಿರುವುದು ಹಾಸ್ಯಾಸ್ಪದ’ ಎಂದು ದೂರಿದರು.