‘ಪ್ರಸ್ತುತ ಬಿರುಬೇಸಿಗೆಯಲ್ಲಿ ಬಿಸಲಿನ ತಾಪ ಹೆಚ್ಚುತ್ತಿದೆ.ಮನೆಯಿಂದ ಹೊರ ಬಂದರೆ ಮರದ ನೆರಳನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆಂಕಿಯಂತೆ ಉಗುಳುವ ಬಿಸಲಿನ ತಾಪಕ್ಕೆ ಪ್ರಾಣಿ ಪಕ್ಷಿ ಸಂಕುಲ ತತ್ತರಿಸುತ್ತಿವೆ. ಈಗಾಗಲೇ ಮನೆಯಂಗಳ ಮತ್ತು ಮನೆಯ ಅಕ್ಕಪಕ್ಕ ಗಿಡಮರ ಬೆಳೆಸಿದ್ದರೆ ಸಣ್ಣ ಪುಟ್ಟ ಬಟ್ಟಲು, ಪ್ಲಾಸ್ಟಿಕ್ ಡಬ್ಬಗಳಲ್ಲಿ ನೀರು ತುಂಬಿಸಿ ಇಟ್ಟರೆ ಪಶು ಪಕ್ಷಿಗಳಿಗೆ ದಾಹ ತೀರಿಸಿಕೊಳ್ಳಲು ಅನುಕೂಲವಾಗಲಿದೆ ಪರಿಸರ ಪ್ರೇಮಿಗಳು ಜಾಗೃತರಾಗಬೇಕು’ ಎಂದು ಮನವಿ ಮಾಡಿದರು. ಯುವ ಮುಖಂಡ ರಾಜೇಶ್ ಉಪಸ್ಥಿತರಿದ್ದರು.