ಹೊಸಕೋಟೆ: ಈಚೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ ನಾಗಿಣಿ ನೃತ್ಯಮಾಡಿ ಸುದ್ದಿಯಾಗಿದ್ದ ವಸತಿ ಸಚಿವ ಎಂ.ಟಿ.ಬಿ. ನಾಗರಾಜ್ ಚುನಾವಣೆ ಮುಗಿದಮೇಲೆ ಗರುಡಾಚಾರ್ಯಪಾಳ್ಯದಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆನೆಯ ಮೇಲೆ ಶ್ರೀರಾಮನ ಮೂರ್ತಿಯನ್ನು ಇಟ್ಟು ಭಾರಿ ಮೆರವಣಿಗೆ ಮಾಡಲಾಯಿತು. ಸಚಿವರು ಆನೆಗೆ ಬಾಳೆಹಣ್ಣು ತಿನ್ನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನಂತರ ಸಾರ್ವಜನಿಕರೊಂದಿಗೆ ಸೇರಿ ನಿಂಬು ನೃತ್ಯ ಮಾಡಿದರು.
ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯ ಸಚಿವರು ಕುಣಿದರು. ಅವರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದ ವಿರೋಧಿಗಳಿಗೆ ಅರೋಗ್ಯ ಚೆನ್ನಾಗಿರುವುದನ್ನು ದೃಢಪಡಿಸಿದ್ದಾರೆ ಎಂದು ಅಭಿಮಾನಿಯೊಬ್ಬರು ತಿಳಿಸಿದರು.