‘ಅಂಗವಿಕಲರ ನೋವು ಏನು ಎನ್ನುವುದರ ಅರಿವು ನನಗಿದೆ. ಗ್ರಾಮೀಣ ಪ್ರದೇಶದಲ್ಲಿನ ಪೋಷಕರಿಗೆ ಅಂಗವಿಕಲ ಮಗು ಜನಿಸಿದರೆ ಅದನ್ನು ಸಾಕಿ ಸಲಹುವುದೇ ದೊಡ್ಡ ಸವಾಲಾಗಿದೆ. ಇಂತಹ ಮಕ್ಕಳನ್ನು ಮಾತೃ ಪ್ರತಿಷ್ಠಾನದ ಮೂಲಕ ದತ್ತು ಪಡೆದು ಅವರಿಗೆ ಅಗತ್ಯ ಇರುವ ಉಚಿತ ಶಿಕ್ಷಣ, ಆರೋಗ್ಯ, ವಸತಿ ಸೌಲಭ್ಯಗಳನ್ನು ಕೊಡಿಸಲಾಗುತ್ತಿದೆ. ನಮ್ಮಲ್ಲಿ ಶಿಕ್ಷಣ ಪಡೆದವರಲ್ಲಿ 15 ಜನ ಪದವಿ ಶಿಕ್ಷಣ ಪಡೆದು ಉತ್ತಮ ಹುದ್ದೆಗಳಿಗೆ ಹೋಗಿರುವುದು ಹೆಮ್ಮೆಯ ಸಂಗತಿ’ ಎಂದರು.