ಬುಧವಾರದಿಂದ ತರಕಾರಿ ವ್ಯಾಪಾರಿಗಳಿಗೆ ಬೆಳಿಗ್ಗೆ7 ರಿಂದ 12 ವರೆಗೆ ವ್ಯವಹರಿಸಲು ಅವಕಾಶ ನೀಡಿದ್ದು, ದಿನಸಿ ಅಂಗಡಿ, ಬಟ್ಟೆ ಅಂಗಡಿ, ಜ್ಯುಯಲರಿ ಅಂಗಡಿ ಸೇರಿದಂತೆ ಇತರ ಅಂಗಡಿಯವರು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮಾತ್ರ ಅಂಗಡಿ ತೆರೆಯಬೇಕು. ದೇವಾಲಯಗಳು ಬೆಳಗ್ಗೆ 6 ಗಂಟೆಯಿಂದ 11 ವರೆಗೆ ತೆರೆಯಬೇಕು ಮತ್ತು ಮಸೀದಿಗಳಲ್ಲಿ ಐದು ಜನರಿಗಿಂತ ಹೆಚ್ಚು ಜನರು ಪ್ರಾರ್ಥನೆ ಮಾಡುವಂತಿಲ್ಲ. ನಗರದ ಎಲ್ಲಾ ಹೋಟೆಲ್ಗಳಲ್ಲಿ ಕಡ್ಡಾಯವಾಗಿ ಕೇವಲ ಪಾರ್ಸಲ್ಗೆಮಾತ್ರ ಅವಕಾಶ ನೀಡಿರುವುದಾಗಿ ತಿಳಿಸಿದರು. ಇದು ಒಂದು ವಾರಗಳ ಕಾಲ ಜಾರಿಯಲ್ಲಿರುತ್ತದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು. ಇದಕ್ಕೆ ಸಭೆ ಒಮ್ಮತದ ನಿರ್ಣಯ ನೀಡಿತು.