ನಂತರ ನಗರದ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಕಾರ್ಯಕರ್ತರನ್ನು ಹುರುದುಂಬಿಸಿದರು. ಕಲಾ ತಂಡಗಳ ವಾದ್ಯ, ಮೇಳ ಆಗಸಕ್ಕೆ ಮುಟ್ಟುವಂತೆ ಸದ್ದು ಮಾಡಿದವು. ಶರತ್ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಅವರನ್ನು ಹೆಗಲ ಮೇಲೆ ಹೊತ್ತು ಅಭಿಮಾನಿಗಳು ಜೈ ಕಾರ ಕೂಗಿದರು. ಹೊಸಕೋಟೆ ಪಟ್ಟಣದ ಶಾಸಕರ ಕಚೇರಿಯಿಂದ ಎರಡು ಕೀ.ಮಿ ವರೆಗೆ ಹೆಗಲ ಮೇಲೆ ಹೊತ್ತು ಸಾಗಿದರು.