<p><strong>ವಿಜಯಪುರ (ದೇವನಹಳ್ಳಿ):</strong> ಶ್ರಾವಣ ಮಾಸ ಆರಂಭದ ನಂತರ ಮಾರುಕಟ್ಟೆಯಲ್ಲಿ ಅಣಬೆಗೆ (ಮಶ್ರೂಮ್) ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೇ ಸಿಗುತ್ತಿಲ್ಲ.</p>.<p>ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಹುತೇಕ ಮಾಂಸಹಾರಿಗಳು ಮಾಂಸ ಸೇವನೆಯಿಂದ ದೂರ ಉಳಿಯುತ್ತಾರೆ. ಮಾಂಸದ ಬದಲಿಗೆ ಬಾಯಿ ರುಚಿಗಾಗಿ ಅಣಬೆ ಬಳಸಿ ಮಸಾಲೆ ಪದಾರ್ಥಗಳಿಂದ ಸಾಂಬರ್, ಫಲಾವ್ ಇತರೆ ಅಡಿಗೆಗಳ ತಯಾರಿಕೆಗೆ ಹೆಚ್ಚು ಬಳಕೆ ಮಾಡಲಾಗುತ್ತಿದೆ.</p>.<p>ಅಣಬೆ 25 ದಿನಗಳಲ್ಲಿ ಬೆಳೆಯುವಂತಹ ಬೆಳೆಯಾಗಿದ್ದು, ಅದರಲ್ಲೂ ಸಾವಯುವ ಕೃಷಿಯಲ್ಲಿ ಬೆಳೆದ ಅಣಬೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಅಣಬೆಯಲ್ಲಿ ರೋಗ ನಿರೋಧಕ ಶಕ್ತಿವುಳ್ಳ ಅಂಶಗಳು ಇರುವುದರಿಂದ ಕೋವಿಡ್ ಬಂದ ಬಳಿಕ ಹೆಚ್ಚಿನ ಜನರು ಅಣಬೆ ಸೇವನೆಗೆ ಒತ್ತು ನೀಡಿದ್ದಾರೆ.</p>.<p>ಸದ್ಯ ಶ್ರಾವಣ ಆರಂಭದ ಬಳಿಕ ಮದುವೆ, ನಾಮಕಾರಣ, ಇತರೆ ಶುಭಕಾರ್ಯಗಳಲ್ಲಿ ಅಣಬೆ ಹೆಚ್ಚು ಬಳಕೆಯಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.</p>.<p>ವಿಜಯಪುರ ಪಟ್ಟಣದಲ್ಲಿ ಐಸ್ ಕ್ರೀಂ ಮಳಿಗೆ, ನಂದಿನಿ ಬೂತ್, ಬೇಕರಿ, ಹಾಪ್ಕಾಮ್ಸ್, ತರಕಾರಿ ಅಂಗಡಿ, ಖಾಸಗಿ ಮಾಲ್ ಸೇರಿದಂತೆ ಇತರೆ ಕಡೆಗಳಲ್ಲಿ ಅಣಬೆ ಮಾರಾಟ ಮಾಡಲಾಗುತ್ತಿದೆ. ಆದರೆ ಈಗ ಬಹುತೇಕ ಮಳಿಗೆಗಳಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಣಬೆ ಸಿಗುತ್ತಿಲ್ಲ.</p>.<p>ದರವು ಹೆಚ್ಚಳ: ಸಾಮಾನ್ಯ ದಿನಗಳಲ್ಲಿ 1 ಕೆ.ಜಿ ಅಣಬೆ ₹200ಗೆ ಮಾರಾಟವಾಗುತ್ತಿದೆ. ಶ್ರಾವಣ, ಕಾರ್ತಿಕ ಮಾಸ, ಇತರೆ ವಿಶೇಷ ಸಂದರ್ಭಗಳಲ್ಲಿ ₹300 ರಿಂದ ₹350 ವರೆಗೆ ಮಾರಾಟವಾಗುತ್ತಿದೆ. ಈಗ 1 ಕೆ.ಜಿ ಅಣಬೆ ₹300 ರಿಂದ ₹350 ಇದೆ. ಈ ಹಿಂದೆ 200 ಗ್ರಾಂ ಅಣಬೆ ಪ್ಯಾಕೆಟ್ ₹35 ಗೆ ಮಾರಾಟವಾಗುತ್ತಿದ್ದರೆ ಈಗ ಇದರ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಣಬೆ ಸಿಗುತ್ತಿಲ್ಲ ಎಂಬುದು ಮಾರಾಟಗಾರರು ಹೇಳುತ್ತಾರೆ.</p>.<p><strong>ಸಾವಯುವ ಅಣಬೆ ಮೇಲೆ ಎಲ್ಲರ ಗಮನ </strong></p><p> ರಾಸಾಯನಿಕ ಬಳಸಿ ಬಟನ್ ಅಣಬೆ ಬೆಳೆಯಲಾಗುತ್ತದೆ. ಇದನ್ನು ಬೆಳೆಯಲು ಹೆಚ್ಚು ವೆಚ್ಚ ತಗಲುತ್ತದೆ. ಸಾವಯುವ ಬೇಸಾಯದಲ್ಲಿ ಭತ್ತದ ಹುಲ್ಲು ಸ್ಪಾನ್ ಬಳಸಿ ಆಯುಸ್ಟಾರ್ ಮಿಲ್ಕಿ ವೈಟ್ ಪಿಂಕ್ ಗ್ರೇ ಣಬೆ ಬೆಳೆಯಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಅಣಬೆ ಕೃಷಿಕ ಚಿಂತಾಮಣಿಯ ಬೂರಗಮಾಕಲಹಳ್ಳಿಯ ಜಗದೀಶ್. </p><p>ಆರೋಗ್ಯಕ್ಕೆ ಅಣಬೆ ಸೇವನೆ ಒಳ್ಳೆಯದು. ಹೀಗಾಗಿ ಇತ್ತೀಚೆಗೆ ಇದರ ಬಳಕೆ ಹೆಚ್ಚಿದೆ. ಈಗ ಶ್ರಾವಣ ಮಾಸದಲ್ಲಿ ಮಾಂಸ ತಿನ್ನುವ ಬದಲು ಅಣಬೆಯಿಂದ ರುಚಿಕಟ್ಟಾದ ಆಹಾರ ತಯಾರಿಸುತ್ತಾರೆ. ಅಲ್ಲದೇ ಶುಭ ಸಮಾರಂಭಗಳಲ್ಲಿ ಅಣಬೆಯ ಬಳಕೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ದಿನಗಳಿಗಿಂತ ದರವು ಹೆಚ್ಚಾಗಿರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯು ಇರುತ್ತಾರೆ ಎಂದು ಅವರು ಹೇಳುತ್ತಾರೆ.</p>.<div><blockquote>ವಾರಕ್ಕೆ ಎರಡು ಬಾರಿ ಅಡುಗೆಗೆ ಅಣಬೆ ಬಳಸುತ್ತೇವೆ. ಶ್ರಾವಣ ಮಾಸ ಶುರುವಾದ ಬಳಿಕ ಮಳಿಗೆಗಳಲ್ಲಿ ಅಣಬೆ ಸಿಗುತ್ತಿಲ್ಲ. ಇದರ ಬೆಲೆಯು ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ತುಟಿಯಾಗಿದೆ. </blockquote><span class="attribution">ಪ್ರಮೀಳಾ, ಗ್ರಾಹಕಿ</span></div>.<div><blockquote>ಶ್ರಾವಣ ಬಂದ ಬಳಿಕ ಗ್ರಾಹಕರು ಹೆಚ್ಚಾಗಿ ಅಣಬೆ ಕೇಳುತ್ತಾರೆ. ಆದರೆ ಬೆಲೆ ಈಗ ಹೆಚ್ಚಾಗಿರುವುದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. </blockquote><span class="attribution">ಪ್ರಕಾಶ್, ಅಣಬೆ ಮಾರಾಟಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಶ್ರಾವಣ ಮಾಸ ಆರಂಭದ ನಂತರ ಮಾರುಕಟ್ಟೆಯಲ್ಲಿ ಅಣಬೆಗೆ (ಮಶ್ರೂಮ್) ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೇ ಸಿಗುತ್ತಿಲ್ಲ.</p>.<p>ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಹುತೇಕ ಮಾಂಸಹಾರಿಗಳು ಮಾಂಸ ಸೇವನೆಯಿಂದ ದೂರ ಉಳಿಯುತ್ತಾರೆ. ಮಾಂಸದ ಬದಲಿಗೆ ಬಾಯಿ ರುಚಿಗಾಗಿ ಅಣಬೆ ಬಳಸಿ ಮಸಾಲೆ ಪದಾರ್ಥಗಳಿಂದ ಸಾಂಬರ್, ಫಲಾವ್ ಇತರೆ ಅಡಿಗೆಗಳ ತಯಾರಿಕೆಗೆ ಹೆಚ್ಚು ಬಳಕೆ ಮಾಡಲಾಗುತ್ತಿದೆ.</p>.<p>ಅಣಬೆ 25 ದಿನಗಳಲ್ಲಿ ಬೆಳೆಯುವಂತಹ ಬೆಳೆಯಾಗಿದ್ದು, ಅದರಲ್ಲೂ ಸಾವಯುವ ಕೃಷಿಯಲ್ಲಿ ಬೆಳೆದ ಅಣಬೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಅಣಬೆಯಲ್ಲಿ ರೋಗ ನಿರೋಧಕ ಶಕ್ತಿವುಳ್ಳ ಅಂಶಗಳು ಇರುವುದರಿಂದ ಕೋವಿಡ್ ಬಂದ ಬಳಿಕ ಹೆಚ್ಚಿನ ಜನರು ಅಣಬೆ ಸೇವನೆಗೆ ಒತ್ತು ನೀಡಿದ್ದಾರೆ.</p>.<p>ಸದ್ಯ ಶ್ರಾವಣ ಆರಂಭದ ಬಳಿಕ ಮದುವೆ, ನಾಮಕಾರಣ, ಇತರೆ ಶುಭಕಾರ್ಯಗಳಲ್ಲಿ ಅಣಬೆ ಹೆಚ್ಚು ಬಳಕೆಯಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.</p>.<p>ವಿಜಯಪುರ ಪಟ್ಟಣದಲ್ಲಿ ಐಸ್ ಕ್ರೀಂ ಮಳಿಗೆ, ನಂದಿನಿ ಬೂತ್, ಬೇಕರಿ, ಹಾಪ್ಕಾಮ್ಸ್, ತರಕಾರಿ ಅಂಗಡಿ, ಖಾಸಗಿ ಮಾಲ್ ಸೇರಿದಂತೆ ಇತರೆ ಕಡೆಗಳಲ್ಲಿ ಅಣಬೆ ಮಾರಾಟ ಮಾಡಲಾಗುತ್ತಿದೆ. ಆದರೆ ಈಗ ಬಹುತೇಕ ಮಳಿಗೆಗಳಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಣಬೆ ಸಿಗುತ್ತಿಲ್ಲ.</p>.<p>ದರವು ಹೆಚ್ಚಳ: ಸಾಮಾನ್ಯ ದಿನಗಳಲ್ಲಿ 1 ಕೆ.ಜಿ ಅಣಬೆ ₹200ಗೆ ಮಾರಾಟವಾಗುತ್ತಿದೆ. ಶ್ರಾವಣ, ಕಾರ್ತಿಕ ಮಾಸ, ಇತರೆ ವಿಶೇಷ ಸಂದರ್ಭಗಳಲ್ಲಿ ₹300 ರಿಂದ ₹350 ವರೆಗೆ ಮಾರಾಟವಾಗುತ್ತಿದೆ. ಈಗ 1 ಕೆ.ಜಿ ಅಣಬೆ ₹300 ರಿಂದ ₹350 ಇದೆ. ಈ ಹಿಂದೆ 200 ಗ್ರಾಂ ಅಣಬೆ ಪ್ಯಾಕೆಟ್ ₹35 ಗೆ ಮಾರಾಟವಾಗುತ್ತಿದ್ದರೆ ಈಗ ಇದರ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಣಬೆ ಸಿಗುತ್ತಿಲ್ಲ ಎಂಬುದು ಮಾರಾಟಗಾರರು ಹೇಳುತ್ತಾರೆ.</p>.<p><strong>ಸಾವಯುವ ಅಣಬೆ ಮೇಲೆ ಎಲ್ಲರ ಗಮನ </strong></p><p> ರಾಸಾಯನಿಕ ಬಳಸಿ ಬಟನ್ ಅಣಬೆ ಬೆಳೆಯಲಾಗುತ್ತದೆ. ಇದನ್ನು ಬೆಳೆಯಲು ಹೆಚ್ಚು ವೆಚ್ಚ ತಗಲುತ್ತದೆ. ಸಾವಯುವ ಬೇಸಾಯದಲ್ಲಿ ಭತ್ತದ ಹುಲ್ಲು ಸ್ಪಾನ್ ಬಳಸಿ ಆಯುಸ್ಟಾರ್ ಮಿಲ್ಕಿ ವೈಟ್ ಪಿಂಕ್ ಗ್ರೇ ಣಬೆ ಬೆಳೆಯಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಅಣಬೆ ಕೃಷಿಕ ಚಿಂತಾಮಣಿಯ ಬೂರಗಮಾಕಲಹಳ್ಳಿಯ ಜಗದೀಶ್. </p><p>ಆರೋಗ್ಯಕ್ಕೆ ಅಣಬೆ ಸೇವನೆ ಒಳ್ಳೆಯದು. ಹೀಗಾಗಿ ಇತ್ತೀಚೆಗೆ ಇದರ ಬಳಕೆ ಹೆಚ್ಚಿದೆ. ಈಗ ಶ್ರಾವಣ ಮಾಸದಲ್ಲಿ ಮಾಂಸ ತಿನ್ನುವ ಬದಲು ಅಣಬೆಯಿಂದ ರುಚಿಕಟ್ಟಾದ ಆಹಾರ ತಯಾರಿಸುತ್ತಾರೆ. ಅಲ್ಲದೇ ಶುಭ ಸಮಾರಂಭಗಳಲ್ಲಿ ಅಣಬೆಯ ಬಳಕೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ದಿನಗಳಿಗಿಂತ ದರವು ಹೆಚ್ಚಾಗಿರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯು ಇರುತ್ತಾರೆ ಎಂದು ಅವರು ಹೇಳುತ್ತಾರೆ.</p>.<div><blockquote>ವಾರಕ್ಕೆ ಎರಡು ಬಾರಿ ಅಡುಗೆಗೆ ಅಣಬೆ ಬಳಸುತ್ತೇವೆ. ಶ್ರಾವಣ ಮಾಸ ಶುರುವಾದ ಬಳಿಕ ಮಳಿಗೆಗಳಲ್ಲಿ ಅಣಬೆ ಸಿಗುತ್ತಿಲ್ಲ. ಇದರ ಬೆಲೆಯು ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ತುಟಿಯಾಗಿದೆ. </blockquote><span class="attribution">ಪ್ರಮೀಳಾ, ಗ್ರಾಹಕಿ</span></div>.<div><blockquote>ಶ್ರಾವಣ ಬಂದ ಬಳಿಕ ಗ್ರಾಹಕರು ಹೆಚ್ಚಾಗಿ ಅಣಬೆ ಕೇಳುತ್ತಾರೆ. ಆದರೆ ಬೆಲೆ ಈಗ ಹೆಚ್ಚಾಗಿರುವುದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. </blockquote><span class="attribution">ಪ್ರಕಾಶ್, ಅಣಬೆ ಮಾರಾಟಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>