ಆಳುವ ಸರ್ಕಾರ ತನ್ನ ರಾಜಕೀಯ ಅಧಿಕಾರ ಬಳಸಿಕೊಂಡು ಏನೋ ತುರ್ತು ಎಂಬಂತೆ ಈ ನೀತಿಯನ್ನು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಒಟ್ಟಾರೆ ವ್ಯವಸ್ಥೆ ಮೇಲೆ ಹೇರಲಾಗಿದೆ. ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಬೇಕು. ಆದರೆ ಈ ನೆಪದಲ್ಲಿ ಅವೈಜ್ಞಾನಿಕವಾದ ಮತ್ತು ವಾಸ್ತವದಲ್ಲಿ ಸಾಧ್ಯವಿಲ್ಲದ ಅಮೂರ್ತ ಕಲ್ಪನೆಗಳನ್ನು ತೇಲಿ ಬಿಡಬಾರದು. ಇದು ಒಂದು ರೀತಿಯಲ್ಲಿ ಕಣ್ಕಟ್ಟೆ ಆಗಿದೆ ಎಂದು ಟೀಕಿಸಿದರು.