ಆನೇಕಲ್:ಕೊರೊನಾದಿಂದಾಗಿ ನೇಕಾರರ ಬದುಕು ತೀವ್ರ ಸಮಸ್ಯೆಗೆ ಸಿಲುಕಿಕೊಂಡಿದೆ. ಹಾಗಾಗಿ, ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ನೇಕಾರರ ಪ್ರತಿ ಕುಟುಂಬಕ್ಕೆ ₹ 10 ಸಾವಿರ ಪರಿಹಾರ ನೀಡಬೇಕು’ ಎಂದು ಮುಖಂಡ ಮೋಹನ್ ತಿಳಿಸಿದರು.
ಪಟ್ಟಣದ ವೀವರ್ಸ್ ಕಾಲೊನಿಯಲ್ಲಿ ರಾಷ್ಟ್ರೀಯ ನೇಕಾರರ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಪಾರಂಪರಿಕವಾಗಿ ನೇಕಾರಿಕೆ ವೃತ್ತಿಯ ಮೂಲಕ ಜೀವನವನ್ನು ನೂರಾರು ಮಂದಿ ರೂಪಿಸಿಕೊಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ನೇಕಾರಿಕೆಗೆ ಸೂಕ್ತ ಸೌಲಭ್ಯ ದೊರೆಯದೇ ಮೂಲೆಗುಂಪಾಗಿದೆ. ಪಾರಂಪರಿಕ ವೃತ್ತಿಯನ್ನು ಉಳಿಸಿಕೊಳ್ಳಬೇಕುಎಂದು ಹೇಳಿದರು.
ನೇಕಾರರ ದಿನಾಚರಣೆ ಅಂಗವಾಗಿ ಕೈಮಗ್ಗಗಳಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು.