<p><strong>ವಿಜಯಪುರ: </strong>‘ನಿತ್ಯ ಮೋಡ ಕವಿಯುತ್ತಿದೆ. ಮಳೆ ಹನಿ ಮಾತ್ರ ನೆಲಕ್ಕೆ ಬೀಳುತ್ತಿಲ್ಲ. ಹದಿನೈದು ದಿನಗಳಿಂದ ತಾಲ್ಲೂಕಿನಾಧ್ಯಂತ ಕಾಣುತ್ತಿರುವ ದೃಶ್ಯವಿದು. ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಮಳೆ ಮಾತ್ರ ಬರುತ್ತಿಲ್ಲ’ ಎಂದು ರೈತ ನಟರಾಜ್ ಆತಂಕ ವ್ಯಕ್ತಪಡಿಸಿದರು.</p>.<p>‘ಆರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಕುಡಿಯುವ ನೀರು, ರಾಸುಗಳ ಮೇವಿಗೆ ಪರದಾಡುವಂತಾಗಿದೆ. ಈ ಬಾರಿಯಾದರೂ ಮಳೆಯಾಗುತ್ತದೆ, ಒಂದಷ್ಟು ಬೆಳೆ ಬೆಳೆದು ಜೀವನ ಸಾಗಿಸುವ ಯೋಚನೆಯಲ್ಲಿ ರಾಗಿ ಬಿತ್ತನೆ ಮಾಡಿದ್ದೇವೆ. ರಾಗಿ, ಕಾಳುಗಳು ಮೊಳಕೆಯೊಡೆದಿವೆ. ಆದರೆ ಮಳೆಯಿಲ್ಲದ ಕಾರಣ ಒಣಗುತ್ತಿವೆ. ಕೆಲವು ಕಡೆ ಬಿತ್ತನೆ ಮಾಡಿರುವ ರಾಗಿ ಮಳೆ ಕೊರತೆಯಿಂದ ಮೊಳಕೆಯೊಡೆದಿಲ್ಲ’ ಎಂದು ದುಗುಡ ಹಂಚಿಕೊಂಡರು.</p>.<p>ಮುಖಂಡ ಶ್ರೀನಿವಾಸ್ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ ಆಗುತ್ತಿದೆ. ನಮ್ಮಲ್ಲಿ ಅನಾವೃಷ್ಠಿಯಾಗಿದೆ. ನಮ್ಮ ಭಾಗದ ಕೆರೆಗಳಿಗೆ ನೀರು ಹರಿಸಿ, ರೈತರ ಬದುಕು ಹಸನುಗೊಳಿಸಿ ಎಂದು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹವಾಮಾನ ಇಲಾಖೆ ಈ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ. ಆದರೂ ಮುಂಗಾರು ಮಳೆ ಅವಧಿ ಮುಗಿಯುತ್ತಾ ಬಂದರೂ, ಬಹಳಷ್ಟು ರೈತರು ಬಿತ್ತನೆಯನ್ನೇ ಮಾಡಿಲ್ಲ’ ಎಂದು ಹೇಳಿದರು.</p>.<p>‘ನಮ್ಮಲ್ಲಿ ದಾಸ್ತಾನು ಬಂದಿದ್ದ ಬಿತ್ತನೆ ಬೀಜಗಳು, ಗೊಬ್ಬರಗಳನ್ನು ವಿತರಣೆ ಮಾಡಿದ್ದೇವೆ. ಶೇ 50ರಷ್ಟು ಬಿತ್ತನೆ ಆಗಿದೆ. ಸರಿಯಾಗಿ ಮೊಳಕೆ ಬರುತ್ತಿಲ್ಲ. ಶೇಂಗಾ, ತೊಗರಿ, ಅಲಸಂದೆ, ರಾಗಿ, ಕೆಲ ತಳಿಗಳಿಗೆ ಕಾಲಾವಕಾಶ ಇದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಬೇವಿನಕಟ್ಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>‘ನಿತ್ಯ ಮೋಡ ಕವಿಯುತ್ತಿದೆ. ಮಳೆ ಹನಿ ಮಾತ್ರ ನೆಲಕ್ಕೆ ಬೀಳುತ್ತಿಲ್ಲ. ಹದಿನೈದು ದಿನಗಳಿಂದ ತಾಲ್ಲೂಕಿನಾಧ್ಯಂತ ಕಾಣುತ್ತಿರುವ ದೃಶ್ಯವಿದು. ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಮಳೆ ಮಾತ್ರ ಬರುತ್ತಿಲ್ಲ’ ಎಂದು ರೈತ ನಟರಾಜ್ ಆತಂಕ ವ್ಯಕ್ತಪಡಿಸಿದರು.</p>.<p>‘ಆರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಕುಡಿಯುವ ನೀರು, ರಾಸುಗಳ ಮೇವಿಗೆ ಪರದಾಡುವಂತಾಗಿದೆ. ಈ ಬಾರಿಯಾದರೂ ಮಳೆಯಾಗುತ್ತದೆ, ಒಂದಷ್ಟು ಬೆಳೆ ಬೆಳೆದು ಜೀವನ ಸಾಗಿಸುವ ಯೋಚನೆಯಲ್ಲಿ ರಾಗಿ ಬಿತ್ತನೆ ಮಾಡಿದ್ದೇವೆ. ರಾಗಿ, ಕಾಳುಗಳು ಮೊಳಕೆಯೊಡೆದಿವೆ. ಆದರೆ ಮಳೆಯಿಲ್ಲದ ಕಾರಣ ಒಣಗುತ್ತಿವೆ. ಕೆಲವು ಕಡೆ ಬಿತ್ತನೆ ಮಾಡಿರುವ ರಾಗಿ ಮಳೆ ಕೊರತೆಯಿಂದ ಮೊಳಕೆಯೊಡೆದಿಲ್ಲ’ ಎಂದು ದುಗುಡ ಹಂಚಿಕೊಂಡರು.</p>.<p>ಮುಖಂಡ ಶ್ರೀನಿವಾಸ್ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ ಆಗುತ್ತಿದೆ. ನಮ್ಮಲ್ಲಿ ಅನಾವೃಷ್ಠಿಯಾಗಿದೆ. ನಮ್ಮ ಭಾಗದ ಕೆರೆಗಳಿಗೆ ನೀರು ಹರಿಸಿ, ರೈತರ ಬದುಕು ಹಸನುಗೊಳಿಸಿ ಎಂದು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹವಾಮಾನ ಇಲಾಖೆ ಈ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ. ಆದರೂ ಮುಂಗಾರು ಮಳೆ ಅವಧಿ ಮುಗಿಯುತ್ತಾ ಬಂದರೂ, ಬಹಳಷ್ಟು ರೈತರು ಬಿತ್ತನೆಯನ್ನೇ ಮಾಡಿಲ್ಲ’ ಎಂದು ಹೇಳಿದರು.</p>.<p>‘ನಮ್ಮಲ್ಲಿ ದಾಸ್ತಾನು ಬಂದಿದ್ದ ಬಿತ್ತನೆ ಬೀಜಗಳು, ಗೊಬ್ಬರಗಳನ್ನು ವಿತರಣೆ ಮಾಡಿದ್ದೇವೆ. ಶೇ 50ರಷ್ಟು ಬಿತ್ತನೆ ಆಗಿದೆ. ಸರಿಯಾಗಿ ಮೊಳಕೆ ಬರುತ್ತಿಲ್ಲ. ಶೇಂಗಾ, ತೊಗರಿ, ಅಲಸಂದೆ, ರಾಗಿ, ಕೆಲ ತಳಿಗಳಿಗೆ ಕಾಲಾವಕಾಶ ಇದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಬೇವಿನಕಟ್ಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>