<p><strong>ದೇವನಹಳ್ಳಿ</strong>: ಮಳೆ ಆರ್ಭಟ ಶನಿವಾರವೂ ಮುಂದುವರೆದಿದೆ. ದೇವನಹಳ್ಳಿಯ ಅಕ್ಕುಪೇಟೆ, ಕೋಡಿಮಂಚೇನಹಳ್ಳಿ ಜನವಸತಿ ಪ್ರದೇಶ ಮತ್ತು ಹೀರಾನಂದಾನಿ ವಿಲ್ಲಾಗೆ ನೀರು ನುಗ್ಗಿದೆ.ಬೊಮ್ಮವಾರದ ಬಳಿ ಅಂಡರ್ಪಾಸ್ ಜಲಾವೃತಗೊಂಡಿದ್ದು, 10 ಅಡಿಯಷ್ಟು ನೀರು ನಿಂತಿದೆ.</p>.<p>ದೇವನಹಳ್ಳಿ ಸುತ್ತಮುತ್ತರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ, ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಹರಿದು ಹೋಗಲು ಜಾಗ ಇಲ್ಲದೆ ನೀರು ಊರೊಳಗೆ ನುಗ್ಗುತ್ತಿದೆ.</p>.<p>ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅರುಳ್ ಕುಮಾರ್ಶನಿವಾರ ದೇವನಹಳ್ಳಿಯ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಗುರುತಿಸಿ, ಅಳತೆ ಮಾಡಿಸಲಾಗುತ್ತಿದೆ. ಆದಷ್ಟೂ ಶೀಘ್ರ ಒತ್ತುವರಿ ತೆರವು ಕಾರ್ಯ ಆರಂಭಿಸಲಿದ್ದೇವೆ. ಈಗಾಗಲೇ ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ರಾಜಕಾಲುವೆಯು ಎಲ್ಲಿ ಒತ್ತುವರಿ ಆಗಿದೆಯೋ ಅಂತಹ ಕಡೆಗಳಲ್ಲಿ ಮಾತ್ರ ಮಳೆ ನೀರು ಹೊರ ಹೋಗಲು ಜಾಗ ಇಲ್ಲದೆ ಸಮಸ್ಯೆಯಾಗಿದೆ. ರಾಜಕಾಲುವೆ ಒತ್ತುವರಿಯಾದಾಗ ಮಾತ್ರವೇ ಇಂತಹ ತಿ ನಿರ್ಮಾಣವಾಗುತ್ತದೆ.ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.</p>.<p>ದೇವನಹಳ್ಳಿ ಸುತ್ತಮುತ್ತ ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿರುವುದಕ್ಕೂ ಇದೇ ಕಾರಣ ಎನ್ನಲಾಗಿದೆ. ತಹಶೀಲ್ದಾರರೊಂದಿಗೆ ಪರಿಶೀಲನೆ ನಡೆಸಿ, ಅಲ್ಲಿಯೂ ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಅರುಳ್ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ಮಳೆ ಆರ್ಭಟ ಶನಿವಾರವೂ ಮುಂದುವರೆದಿದೆ. ದೇವನಹಳ್ಳಿಯ ಅಕ್ಕುಪೇಟೆ, ಕೋಡಿಮಂಚೇನಹಳ್ಳಿ ಜನವಸತಿ ಪ್ರದೇಶ ಮತ್ತು ಹೀರಾನಂದಾನಿ ವಿಲ್ಲಾಗೆ ನೀರು ನುಗ್ಗಿದೆ.ಬೊಮ್ಮವಾರದ ಬಳಿ ಅಂಡರ್ಪಾಸ್ ಜಲಾವೃತಗೊಂಡಿದ್ದು, 10 ಅಡಿಯಷ್ಟು ನೀರು ನಿಂತಿದೆ.</p>.<p>ದೇವನಹಳ್ಳಿ ಸುತ್ತಮುತ್ತರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ, ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಹರಿದು ಹೋಗಲು ಜಾಗ ಇಲ್ಲದೆ ನೀರು ಊರೊಳಗೆ ನುಗ್ಗುತ್ತಿದೆ.</p>.<p>ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅರುಳ್ ಕುಮಾರ್ಶನಿವಾರ ದೇವನಹಳ್ಳಿಯ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಗುರುತಿಸಿ, ಅಳತೆ ಮಾಡಿಸಲಾಗುತ್ತಿದೆ. ಆದಷ್ಟೂ ಶೀಘ್ರ ಒತ್ತುವರಿ ತೆರವು ಕಾರ್ಯ ಆರಂಭಿಸಲಿದ್ದೇವೆ. ಈಗಾಗಲೇ ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ರಾಜಕಾಲುವೆಯು ಎಲ್ಲಿ ಒತ್ತುವರಿ ಆಗಿದೆಯೋ ಅಂತಹ ಕಡೆಗಳಲ್ಲಿ ಮಾತ್ರ ಮಳೆ ನೀರು ಹೊರ ಹೋಗಲು ಜಾಗ ಇಲ್ಲದೆ ಸಮಸ್ಯೆಯಾಗಿದೆ. ರಾಜಕಾಲುವೆ ಒತ್ತುವರಿಯಾದಾಗ ಮಾತ್ರವೇ ಇಂತಹ ತಿ ನಿರ್ಮಾಣವಾಗುತ್ತದೆ.ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.</p>.<p>ದೇವನಹಳ್ಳಿ ಸುತ್ತಮುತ್ತ ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿರುವುದಕ್ಕೂ ಇದೇ ಕಾರಣ ಎನ್ನಲಾಗಿದೆ. ತಹಶೀಲ್ದಾರರೊಂದಿಗೆ ಪರಿಶೀಲನೆ ನಡೆಸಿ, ಅಲ್ಲಿಯೂ ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಅರುಳ್ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>