ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮಹತ್ವ
ದ್ದಾಗಿದ್ದು, ಪ್ರತಿ ಗ್ರಾಮಗಳ ಸಂಪರ್ಕಕ್ಕೆ ಹೆಚ್ಚು ಅನುಕೂಲವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 98 ಕಿ.ಮೀ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ತಳಗವಾರ-ಕೊಳೂರು-ಹೊನ್ನಾಘಟ್ಟ ಸಂಪರ್ಕ ರಸ್ತೆಯ 5 ಕಿ.ಮೀ, ಗುಂಡ ಸಂದ್ರ-ತೂಬಗೆರೆ-ನೆಲೆಗುದಿಗೆ ರಸ್ತೆ 4 ಕಿ.ಮೀ, ಕೆ.ಕೆ.ರಸ್ತೆ-ನೆಲಕುಂಟೆ ಪಾಳ್ಯ-ನಾಗಶೆಟ್ಟಿಹಳ್ಳಿ-ತಿಪ್ಪೂರು-ಬೊಮ್ಮನಹಳ್ಳಿ-ಮಾಡೇಶ್ವರ ಗ್ರಾಮ ಸಂಪರ್ಕಕ್ಕೆ 14 ಕಿ.ಮೀ ಸೇರಿ ₹15.83 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.