<p>ಆನೇಕಲ್<strong>: </strong>ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಬಮುಲ್ ಹಲವು ಕ್ರಮ ಕೈಗೊಂಡಿದೆ. ಹಾಲಿಗೆ ವೈಜ್ಞಾನಿಕವಾಗಿ ದರ ನಿಗದಿ ಪಡಿಸಲು ಆದ್ಯತೆ ನೀಡಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.</p>.<p>ತಾಲ್ಲೂಕಿನ ಸಮಂದೂರು ಗ್ರಾಮದಲ್ಲಿ ದಾನಿಗಳ ರೈತರಿಗೆ ನೀಡಿದ ಮ್ಯಾಟ್ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಹಸುಗಳನ್ನು ಮೇಲೆತ್ತುವ ಸ್ಟ್ಯಾಂಡ್ನ್ನು ವಿತರಿಸಿ ಮಾತನಾಡಿದರು.</p>.<p>ಬಮುಲ್ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ. ಹಾಲಿನ ಪೌಡರ್ ಮಾಡುತ್ತಿರುವುದರಿಂದ ಹೆಚ್ಚಿನ ಲಾಭ ದೊರೆಯುತ್ತಿಲ್ಲ. ಇದರಿಂದ ಬಮುಲ್ ಅಲ್ಪ ನಷ್ಟದಲ್ಲಿ ಮುಂದಿನ ದಿನಗಳಲ್ಲಿ ಬಮುಲ್ ಲಾಭದಾಯಕ ಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.</p>.<p>ವಿವಿಧ ಡೈರಿಗಳಿಂದ 17 ಲಕ್ಷ ಲೀಟರ್ ಹಾಲು ಬಮೂಲ್ಗೆ ಬರುತ್ತದೆ. ಈ ಪೈಕಿ 9 ಲಕ್ಷ ಲೀಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ. 2 ಲಕ್ಷ ಲೀಟರ್ ಮೊಸರಿಗೆ ಹೋಗುತ್ತದೆ. ಉಳಿದಿದ್ದೆಲ್ಲಾ ಹಾಲಿನ ಪೌಡರ್ಗೆ ಬಳಕೆ ಮಾಡಲಾಗುತ್ತಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಬಮುಲ್ ಅಭಿವೃದ್ಧಿಪಡಿಸಲು ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಸಮಂದೂರು ಹಾಲು ಉತ್ಪಾದಕರ ಸಂಘದಲ್ಲಿ 220 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಗ್ರಾಮದಲ್ಲಿ ಒಂದು ಸಾವಿರ ಲೀಟರ್ ಹಾಲು ಹಾಕಲಾಗುತ್ತಿತ್ತು. ಮತ್ತೆ ಅಷ್ಟೇ ಹಾಲು ಉತ್ಪಾದಿಸುವತ್ತ ಸಂಘ ಮತ್ತು ರೈತರು ಗಮನ ಹರಿಸಬೇಕೆಂದರು.</p>.<p>ಆನೇಕಲ್ ತಾಲ್ಲೂಕು ಗಡಿ ಭಾಗದಲ್ಲಿದೆ. ಅಭಿವೃದ್ಧಿ ಹೆಸರಿನಲ್ಲಿ ರೈತರು ಕೃಷಿ ಕಡಿಮೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯುವುದಿಲ್ಲ. ಆದರೆ ಕೃಷಿ, ಹೈನುಗಾರಿಕೆಯಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎಂಧು ಹೇಳಿದರು.</p>.<p>ಹಾಲು ಉತ್ಪಾದಕರಿಗೆ ಚೈತನ್ಯ ನೀಡಬೇಕು ಮತ್ತು ಪ್ರೋತ್ಸಾಹ ನೀಡಬೇಕು. ರೈತರು ಪರಸ್ಪರ ಸೇವೆ ಮತ್ತು ಪರಸ್ಪರ ಸಹಾಯದಿಂದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಮಂದೂರು ಗ್ರಾಮದ ರಾಮಣ್ಣ, ನವೀನ್, ಮುನಿರಾಜು, ಕೃಷ್ಣಪ್ಪ ಕುಟುಂಬದವರು ಹೈನುಗಾರಿಕೆ ಮಾಡುವವರಿಗೆ ಮ್ಯಾಟ್ ಮತ್ತು ಡೈರಿಗೆ ಹಸು ಎತ್ತಲು ಸ್ಟ್ಯಾಂಡ್ ವಿತರಿಸಿರುವುದು ಶ್ಲಾಘನೀಯ ಎಂದರು.</p>.<p>ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಲಿಂಗಣ್ಣ, ಮುಖಂಡರಾದ ಕೆಂಪರಾಜು, ಬಿ.ಪಿ.ರಮೇಶ್, ಮಹೇಂದ್ರ, ಜಯಣ್ಣ, ಅತ್ತಿಬೆಲೆ ಚಂದ್ರಪ್ಪ, ಮುನಿಸ್ವಾಮಿ, ಮೋಹನ್ ಕೃಷ್ಣ, ಮಾಜಿ ರವಿ, ಗಿರೀಶ್, ಭಾರ್ಗವ್ ಶ್ರೀನಾಥ್ ರೆಡ್ಡಿ, ರಾಮಕೃಷ್ಣ, ಮಧುಕುಮಾರ್, ಶ್ರೀನಿವಾಸ್ ಇದ್ದರು.</p>.<p><strong>ಸಮಂದೂರು ಕೆರೆಗೆ ನೀರು</strong> </p><p>‘ಸಮಂದೂರು ಗ್ರಾಮದ ಎರಡು ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಜನ ವಿಶ್ರಾಂತಿ ನೀಡಿದ್ದರಿಂದ ಯೋಜನೆ ತಪ್ಪಿದೆ. ಮುಂದಿನ ದಿನಗಳಲ್ಲಿ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್<strong>: </strong>ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಬಮುಲ್ ಹಲವು ಕ್ರಮ ಕೈಗೊಂಡಿದೆ. ಹಾಲಿಗೆ ವೈಜ್ಞಾನಿಕವಾಗಿ ದರ ನಿಗದಿ ಪಡಿಸಲು ಆದ್ಯತೆ ನೀಡಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.</p>.<p>ತಾಲ್ಲೂಕಿನ ಸಮಂದೂರು ಗ್ರಾಮದಲ್ಲಿ ದಾನಿಗಳ ರೈತರಿಗೆ ನೀಡಿದ ಮ್ಯಾಟ್ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಹಸುಗಳನ್ನು ಮೇಲೆತ್ತುವ ಸ್ಟ್ಯಾಂಡ್ನ್ನು ವಿತರಿಸಿ ಮಾತನಾಡಿದರು.</p>.<p>ಬಮುಲ್ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ. ಹಾಲಿನ ಪೌಡರ್ ಮಾಡುತ್ತಿರುವುದರಿಂದ ಹೆಚ್ಚಿನ ಲಾಭ ದೊರೆಯುತ್ತಿಲ್ಲ. ಇದರಿಂದ ಬಮುಲ್ ಅಲ್ಪ ನಷ್ಟದಲ್ಲಿ ಮುಂದಿನ ದಿನಗಳಲ್ಲಿ ಬಮುಲ್ ಲಾಭದಾಯಕ ಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.</p>.<p>ವಿವಿಧ ಡೈರಿಗಳಿಂದ 17 ಲಕ್ಷ ಲೀಟರ್ ಹಾಲು ಬಮೂಲ್ಗೆ ಬರುತ್ತದೆ. ಈ ಪೈಕಿ 9 ಲಕ್ಷ ಲೀಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ. 2 ಲಕ್ಷ ಲೀಟರ್ ಮೊಸರಿಗೆ ಹೋಗುತ್ತದೆ. ಉಳಿದಿದ್ದೆಲ್ಲಾ ಹಾಲಿನ ಪೌಡರ್ಗೆ ಬಳಕೆ ಮಾಡಲಾಗುತ್ತಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಬಮುಲ್ ಅಭಿವೃದ್ಧಿಪಡಿಸಲು ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಸಮಂದೂರು ಹಾಲು ಉತ್ಪಾದಕರ ಸಂಘದಲ್ಲಿ 220 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಗ್ರಾಮದಲ್ಲಿ ಒಂದು ಸಾವಿರ ಲೀಟರ್ ಹಾಲು ಹಾಕಲಾಗುತ್ತಿತ್ತು. ಮತ್ತೆ ಅಷ್ಟೇ ಹಾಲು ಉತ್ಪಾದಿಸುವತ್ತ ಸಂಘ ಮತ್ತು ರೈತರು ಗಮನ ಹರಿಸಬೇಕೆಂದರು.</p>.<p>ಆನೇಕಲ್ ತಾಲ್ಲೂಕು ಗಡಿ ಭಾಗದಲ್ಲಿದೆ. ಅಭಿವೃದ್ಧಿ ಹೆಸರಿನಲ್ಲಿ ರೈತರು ಕೃಷಿ ಕಡಿಮೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯುವುದಿಲ್ಲ. ಆದರೆ ಕೃಷಿ, ಹೈನುಗಾರಿಕೆಯಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎಂಧು ಹೇಳಿದರು.</p>.<p>ಹಾಲು ಉತ್ಪಾದಕರಿಗೆ ಚೈತನ್ಯ ನೀಡಬೇಕು ಮತ್ತು ಪ್ರೋತ್ಸಾಹ ನೀಡಬೇಕು. ರೈತರು ಪರಸ್ಪರ ಸೇವೆ ಮತ್ತು ಪರಸ್ಪರ ಸಹಾಯದಿಂದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಮಂದೂರು ಗ್ರಾಮದ ರಾಮಣ್ಣ, ನವೀನ್, ಮುನಿರಾಜು, ಕೃಷ್ಣಪ್ಪ ಕುಟುಂಬದವರು ಹೈನುಗಾರಿಕೆ ಮಾಡುವವರಿಗೆ ಮ್ಯಾಟ್ ಮತ್ತು ಡೈರಿಗೆ ಹಸು ಎತ್ತಲು ಸ್ಟ್ಯಾಂಡ್ ವಿತರಿಸಿರುವುದು ಶ್ಲಾಘನೀಯ ಎಂದರು.</p>.<p>ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಲಿಂಗಣ್ಣ, ಮುಖಂಡರಾದ ಕೆಂಪರಾಜು, ಬಿ.ಪಿ.ರಮೇಶ್, ಮಹೇಂದ್ರ, ಜಯಣ್ಣ, ಅತ್ತಿಬೆಲೆ ಚಂದ್ರಪ್ಪ, ಮುನಿಸ್ವಾಮಿ, ಮೋಹನ್ ಕೃಷ್ಣ, ಮಾಜಿ ರವಿ, ಗಿರೀಶ್, ಭಾರ್ಗವ್ ಶ್ರೀನಾಥ್ ರೆಡ್ಡಿ, ರಾಮಕೃಷ್ಣ, ಮಧುಕುಮಾರ್, ಶ್ರೀನಿವಾಸ್ ಇದ್ದರು.</p>.<p><strong>ಸಮಂದೂರು ಕೆರೆಗೆ ನೀರು</strong> </p><p>‘ಸಮಂದೂರು ಗ್ರಾಮದ ಎರಡು ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಜನ ವಿಶ್ರಾಂತಿ ನೀಡಿದ್ದರಿಂದ ಯೋಜನೆ ತಪ್ಪಿದೆ. ಮುಂದಿನ ದಿನಗಳಲ್ಲಿ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>